Pahalgam Attack: ಪಾಕ್ ಸಚಿವರಿಗೆ ಉಗ್ರರೇ ಬೆಸ್ಟ್ಫ್ರೆಂಡ್ಸ್! ಮತ್ತೊಂದು ಶಾಕಿಂಗ್ ವಿಡಿಯೊ ವೈರಲ್
ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿದೆ ಎಂದು ಹಲವು ದಶಕಗಳಿಂದ ಭಾರತ ಆರೋಪಿಸುತ್ತಲೇ ಇದ್ದರೂ ಇದನ್ನು ಅಲ್ಲಗಳೆಯುತ್ತಲೇ ಬಂದಿದೆ ಪಾಕಿಸ್ತಾನ. ಆದರೆ ಇತ್ತೀಚೆಗೆ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನದ ಒಂದೊಂದೇ ಮುಖ ಬಯಲಾಗುತ್ತಿದೆ. ಉಗ್ರರನ್ನು ಪಾಕಿಸ್ತಾನ ಬೆಳೆಸುತ್ತಿದೆ ಎನ್ನುವುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಇತ್ತೀಚೆಗೆ ಫೆಡರಲ್ ಮತ್ತು ಪಂಜಾಬ್ ಪ್ರಾಂತೀಯ ಸರ್ಕಾರಗಳ ಹಿರಿಯ ಮಂತ್ರಿಗಳು ಪಾಲ್ಗೊಂಡಿದ್ದ ಪರಮಾಣು ಪರೀಕ್ಷೆಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಕೆಲವು ಮೋಸ್ಟ್ ವಾಂಟೆಡ್ ಭಯೋತ್ಪಾದಕರು ವೇದಿಕೆಯನ್ನು ಹಂಚಿಕೊಂಡಿರುವುದು ಕಂಡುಬಂದಿದೆ.


ಲಾಹೋರ್ : ಕಾಶ್ಮೀರದ (Kashmir) ಪಹಲ್ಗಾಮ್ ನ (Pahalgam Attack) ಬೈಸರನ್ ಕಣಿವೆಯಲ್ಲಿ ಉಗ್ರರು ನಡೆಸಿದ ದಾಳಿಯ (terror attack) ಬಳಿಕ ಭಾರತೀಯ ಸೇನೆ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ನಡೆಸಿ ಒಂಬತ್ತು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದಾದ ಬಳಿಕವೂ ತಮ್ಮ ದೇಶದಲ್ಲಿ ಭಯೋತ್ಪಾದಕರೇ ಇಲ್ಲ ಎನ್ನುತ್ತಿರುವ ಪಾಕ್ ನ ಒಂದೊಂದೇ ಮುಖಗಳು ಈಗ ಬಯಲಾಗುತ್ತಿದೆ. ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಎಲ್ಇಟಿ ಕಮಾಂಡರ್ಗಳೊಂದಿಗೆ LeT commanders) ಪಾಕಿಸ್ತಾನದ ಸಚಿವರು ವೇದಿಕೆ ಹಂಚಿಕೊಂಡಿರುವ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿದೆ ಎಂದು ಹಲವು ದಶಕಗಳಿಂದ ಭಾರತ ಆರೋಪಿಸುತ್ತಲೇ ಇದ್ದರೂ ಇದನ್ನು ಅಲ್ಲಗಳೆಯುತ್ತಲೇ ಬಂದಿದೆ ಪಾಕಿಸ್ತಾನ. ಆದರೆ ಇತ್ತೀಚೆಗೆ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನದ ಒಂದೊಂದೇ ಮುಖ ಬಯಲಾಗುತ್ತಿದೆ.
ಉಗ್ರರನ್ನು ಪಾಕಿಸ್ತಾನ ಬೆಳೆಸುತ್ತಿದೆ ಎನ್ನುವುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಇತ್ತೀಚೆಗೆ ಫೆಡರಲ್ ಮತ್ತು ಪಂಜಾಬ್ ಪ್ರಾಂತೀಯ ಸರ್ಕಾರಗಳ ಹಿರಿಯ ಮಂತ್ರಿಗಳು ಪಾಲ್ಗೊಂಡಿದ್ದ ಪರಮಾಣು ಪರೀಕ್ಷೆಗಳ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಕೆಲವು ಮೋಸ್ಟ್ ವಾಂಟೆಡ್ ಭಯೋತ್ಪಾದಕರು ವೇದಿಕೆಯನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಮೇ 28 ರಂದು ಪಾಕಿಸ್ತಾನದ ಪಂಜಾಬ್ನಲ್ಲಿ ಯೂಮ್-ಎ-ತಕ್ಬೀರ್ ಅನ್ನು ಸ್ಮರಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಈಗ ವಿಶ್ವದಾದ್ಯಂತ ಕಳವಳವನ್ನು ಹುಟ್ಟುಹಾಕಿದೆ.
Youm-E-Takbeer in Pákistan turned into a parade of terrórists.Talha Saeed(son of Hafiz Saeed) & Saifullah Kasuri (LeT deputy chief) both hiding a weeks,appeared publicly in Kasur under state security.This isn’t a rogue cell.This state backed terrórism #mockdrill #IndiaPakistanWar pic.twitter.com/I4KkKl6WXA
— TIger NS (@TIgerNS3) May 28, 2025
ಈ ಕಾರ್ಯಕ್ರಮದ ವೇದಿಕೆಯಲ್ಲಿ ಪಾಕಿಸ್ತಾನದ ಆಹಾರ ಸಚಿವ ಮಲಿಕ್ ರಶೀದ್ ಅಹ್ಮದ್ ಖಾನ್ , ಪಂಜಾಬ್ ಅಸೆಂಬ್ಲಿ ಸ್ಪೀಕರ್ ಮಲಿಕ್ ಮುಹಮ್ಮದ್ ಅಹ್ಮದ್ ಖಾನ್, ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಿಎಂಎಲ್-ಎನ್ ನಾಯಕ ಮರ್ಯಮ್ ನವಾಜ್ ಹಾಗೂ ಅವರ ಆಪ್ತ ಸಹಾಯಕರು ಲಷ್ಕರ್-ಎ-ತೈಬಾದೊಂದಿಗೆ ನಂಟು ಹೊಂದಿರುವ ಸೈಫುಲ್ಲಾ ಕಸೂರಿ, ಹಫೀಜ್ ಸಯೀದ್ ನ ಪುತ್ರ ತಲ್ಹಾ ಸಯೀದ್ ಮತ್ತು ಅಮೀರ್ ಹಮ್ಜಾ ಕುಳಿತಿದ್ದರು. ಈ ಸಭೆಯಲ್ಲಿ ಭಯೋತ್ಪಾದನೆಯ ಬಗ್ಗೆ ಬಹಿರಂಗವಾಗಿಯೇ ಪ್ರಚಾರ ನಡೆಸಲಾಯಿತು.

ಉಗ್ರರನ್ನು ಪಾಕಿಸ್ತಾನದ ರಕ್ಷಕರು ಎಂದ ಸಚಿವ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಲಿಕ್ ರಶೀದ್, ಉಗ್ರರನ್ನು ಪಾಕಿಸ್ತಾನದ ರಕ್ಷಕರು ಎಂದು ಕರೆದಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಇಂದು 24 ಕೋಟಿ ಪಾಕಿಸ್ತಾನಿಯರನ್ನು ಹಫೀಜ್ ಸಯೀದ್ ಮತ್ತು ಸೈಫುಲ್ಲಾ ಕಸೂರಿಯಂತಹ ವ್ಯಕ್ತಿಗಳು ಪ್ರತಿನಿಧಿಸುತ್ತಿದ್ದಾರೆ ಎಂದ ಅವರು ಮುರಿಡ್ಕೆಯ ಎಲ್ಇಟಿ ಪ್ರಧಾನ ಕಚೇರಿಯ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಲಷ್ಕರ್ ಕಮಾಂಡರ್ ಮುದಾಸೀರ್ ಅವರ ಸಹೋದರನಿಗೆ ಉದ್ಯೋಗ ನೀಡುವುದಾಗಿಯೂ ಈ ಸಂದರ್ಭದಲ್ಲಿ ಘೋಷಿಸಿದರು.
ಜಗತ್ತಿಗೆ ಈಗ ನನ್ನ ಹೆಸರು ಗೊತ್ತು ಎಂದ ಭಯೋತ್ಪಾದಕ
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲ್ಪಟ್ಟ ಸೈಫುಲ್ಲಾ ಕಸೂರಿ ಬಳಿಕ ಭೂಗತನಾಗಿದ್ದ. ಈ ಸಭೆಯಲ್ಲಿ ಕಾಣಿಸಿಕೊಂಡ ಆತ 24 ನಿಮಿಷಗಳ ಕಾಲ ಮಾತನಾಡಿ, ಪಹಲ್ಗಾಮ್ ಘಟನೆಗೆ ನಾನು ಕಾರಣ ಎಂದು ಆರೋಪಿಸಲಾಗಿದೆ. ಇದರಿಂದ ಈಗ ಇಡೀ ಜಗತ್ತಿಗೆ ನನ್ನ ಹೆಸರು ತಿಳಿದಿದೆ ಎನ್ನುವ ಹೆಮ್ಮೆ ಇದೆ ಎಂದು ಹೇಳಿದ.
ಪಹಲ್ಗಾಮ್ ದಾಳಿಯ ಬಳಿಕ ಕಸೂರಿ ಬಹಾವಲ್ಪುರದಲ್ಲಿ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐನಿಂದ ಆಶ್ರಯ ಪಡೆದಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಈ ಕಾರ್ಯಕ್ರಮದ ಛಾಯಾಚಿತ್ರ ಮತ್ತು ವಿಡಿಯೊಗಳು ಈಗ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಅನೇಕರು ಇದನ್ನು ಭಯೋತ್ಪಾದನಾ ಸಂಘಟನೆಗಳೊಂದಿಗೆ ಪಾಕಿಸ್ತಾನದ ಅಪವಿತ್ರ ಮೈತ್ರಿಗೆ ಪುರಾವೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದ ಕೊನೆಯಲ್ಲಿ ಕಸೂರಿ ಮಂತ್ರಿಗಳ ಹೆಸರು ಹೇಳಿ ಧನ್ಯವಾದ ಹೇಳಲು ಪ್ರಾರಂಭಿಸಿದಾಗ ಭದ್ರತಾ ಸಿಬ್ಬಂದಿ ಚಿತ್ರೀಕರಣ ನಿಲ್ಲಿಸುವಂತೆ ಮಾಧ್ಯಮಗಳಿಗೆ ಸೂಚಿಸುತ್ತಿರುವುದು ಕೂಡ ಕಂಡು ಬಂದಿದೆ.
ಭಾರತ ವಿರೋಧಿ ಖಲಿಸ್ತಾನಿ ಪರ ಘೋಷಣೆ
ಲಷ್ಕರ್-ಎ-ತೈಬಾ ಸಹ-ಸಂಸ್ಥಾಪಕ ಮತ್ತು ನಿಯೋಜಿತ ಜಾಗತಿಕ ಭಯೋತ್ಪಾದಕ ಅಮೀರ್ ಹಮ್ಜಾ ವೇದಿಕೆಯಲ್ಲಿದ್ದುಕೊಂಡೇ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದನು. ಸಭೆಯಲ್ಲಿ ಆತನ ಉಪಸ್ಥಿತಿ ಮತ್ತು ಮುಕ್ತ ಭಾಷಣ ಭಾರತದ ಪಂಜಾಬ್ನಲ್ಲಿ ಪ್ರತ್ಯೇಕತಾವಾದ ಮತ್ತು ಅಶಾಂತಿಯನ್ನು ಪ್ರಚೋದಿಸಲು ಪಾಕಿಸ್ತಾನದ ನಡೆಸಿರುವ ಕುತಂತ್ರ ಎನ್ನಲಾಗುತ್ತಿದೆ.
ಭಾರತದ ವಿರುದ್ಧ ಸೈದ್ಧಾಂತಿಕ ಯುದ್ಧವನ್ನು ಪ್ರಾರಂಭಿಸಲು ಐಎಸ್ಐ-ಎಲ್ಇಟಿ ಜಂಟಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಇದು ದೃಢಪಡಿಸುತ್ತದೆ.

ಇದೇ ಸಂದರ್ಭದಲ್ಲಿ ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ, ಹಫೀಜ್ ಸಯೀದ್ನ ರಾಜಕೀಯ ಸಂಘಟನೆಯಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ರಾಲಿಗಳನ್ನು ನಡೆಸಿತು. ಇದರಲ್ಲಿ ಹಫೀಜ್ ಸಯೀದ್, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಇತರ ಹಿರಿಯ ರಕ್ಷಣಾ ಅಧಿಕಾರಿಗಳ ಪೋಸ್ಟರ್ಗಳನ್ನು ಹಿಡಿದಿದ್ದರು.
ಇದನ್ನೂ ಓದಿ: KTPP Bill: ಮುಸ್ಲಿಂ ಮೀಸಲು ವಿಧೇಯಕ ರಾಷ್ಟ್ರಪತಿಗೆ ಕಳಿಸಲು ಕರ್ನಾಟಕ ಸರ್ಕಾರ ಚಿಂತನೆ
ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ತಜ್ಞರು, ಪಾಕಿಸ್ತಾನದ ಮಂತ್ರಿಗಳು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಅಪ್ಪಿಕೊಳ್ಳುತ್ತಿರುವುದನ್ನು ನೋಡಿದರೆ ಯಾವುದೇ ಶಾಂತಿ ಮಾತುಕತೆ ಮುಂದುವರಿಯಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಭಯೋತ್ಪಾದಕರನ್ನು ಅದರಲ್ಲೂ ವಿಶೇಷವಾಗಿ ಪಹಲ್ಗಾಮ್ ಹತ್ಯಾಕಾಂಡಕ್ಕೆ ಸಂಬಂಧಿಸಿರುವ ಸೈಫುಲ್ಲಾ ಕಸೂರಿಯನ್ನು ಸಾರ್ವಜನಿಕವಾಗಿ ವೈಭವೀಕರಿಸುವುದು ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಮಾನದಂಡಗಳಿಗೆ ಮಾಡಿರುವ ಅವಮಾನ ಎಂದು ತಿಳಿಸಿದ್ದಾರೆ.