ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಆಫೀಸ್​ನಲ್ಲಿ ಎಲ್ಲರ ಮುಂದೆ ಕನ್ನಿಕಾಳ ಮಾನ ಹರಾಜು ಮಾಡಿದ ಭಾಗ್ಯ ಅತ್ತೆ

ಕುಸುಮಾಳ ಮಾತಿನಿಂದ ಕೆರಳಿದ ಕನ್ನಿಕಾ, ಏಯ್.. ದೊಡ್ಡವರು ಅಂತ ಮರ್ಯಾದೆ ಕೊಟ್ಟು ಮಾತಾಡ್ತಾ ಇದ್ದೇನೆ.. ಅದನ್ನು ಉಳಿಸಿಕೊಳ್ಳಿ.. ಇಲ್ಲಾಂದ್ರೆ.. ಎಂದು ಹೇಳುತ್ತಾಳೆ. ಅತ್ತೆಗೆ ಕೈ ತೋರಿಸಿ ಮಾತನಾಡಿದ್ದಕ್ಕೆ ಭಾಗ್ಯಾಗೆ ಸಿಟ್ಟು ಬಂದಿದೆ. ನೇರವಾಗಿ ಕನ್ನಿಕಾ ಎದುರು ಬಂದ ಭಾಗ್ಯ, ಇಲ್ಲಾಂದ್ರೆ ಏನು ಮಾಡ್ತೀಯಾ? ಎಂದು ಕೇಳಿದ್ದಾಳೆ.

ಆಫೀಸ್​ನಲ್ಲಿ ಎಲ್ಲರ ಮುಂದೆ ಕನ್ನಿಕಾಳ ಮಾನ ಹರಾಜು ಮಾಡಿದ ಭಾಗ್ಯ ಅತ್ತೆ

Bhagya Lakshmi Serial

Profile Vinay Bhat Apr 23, 2025 12:37 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತನ್ನ ವಿರುದ್ಧ ನಿಂತವರ ವಿರುದ್ಧ ಸೇಡಿ ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಇದಕ್ಕೆ ಭಾಗ್ಯಾಳ ಅತ್ತೆ ಕುಸುಮಾ ಕೂಡ ಕೈಜೋಡಿಸಿದ್ದಾರೆ. ತನಗೆ ಕೆಡುಕು ಬಯಸಲು ಬಂದವರಿಗೆ ಸರಿಯಾಗಿ ತಿರುಗೇಟು ಕೊಡಲು ಮುಂದಾಗಿದ್ದಾಳೆ ಭಾಗ್ಯ. ತಾಂಡವ್ ಹಾಗೂ ಶ್ರೇಷ್ಠಾ, ಕನ್ನಿಕಾ ಜೊತೆ ಸೇರಿ ಭಾಗ್ಯಾಳನ್ನು ಸೋಲಿಸಲು ನಾನಾ ಪ್ರಯುತ್ನ ಮಾಡಿದರೂ ಯಾವುದೂ ಯಶಸ್ಸು ಕಂಡಿಲ್ಲ. ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಇದೀಗ ಕನ್ನಿಕಾಳ ಆಫೀಸ್​ಗೆ ಹೋಗಿ ಅವಳ ಸಿಬ್ಬಂದಿಗಳ ಎದುರೇ ಮಾನ ಹರಾಜು ಮಾಡಿದ್ದಾರೆ.

ಕೈ ತುತ್ತು ಬ್ಯುಸಿನೆಸ್​ಗೆ ಲೈಸನ್ಸ್ ಸಿಕ್ಕಿದ ಬಳಿಕ ಭಾಗ್ಯ ಮನೆಯವರ ಎದುರು ನನಗೆ ಲೈಸನ್ಸ್ ಸಿಕ್ಕಿತು ಹಾಗೂ ಕನ್ನಿಕಾ ಕೂಟ್ಟ ಕಾಟವನ್ನು ವಿವರಿಸಿದ್ದಾಳೆ. ಇದರಿಂದ ಕೆರಳಿದ ಕುಸುಮಾ, ಭಾಗ್ಯಳನ್ನು ಕರೆದುಕೊಂಡು ಸುಮಾರು 30 ಜನರಿಗೆ ಆಗುವಷ್ಟು ಊಟ ರೆಡಿ ಮಾಡಿ ಕೊಡು ಎಂದು ಹೇಳಿದ್ದಾಳೆ. ಯಾಕೆ ಎಂದು ಕೇಳಿದಾಗ ನಾವು ಕನ್ನಿಕಾ ಆಫೀಸ್‌ಗೆ ಹೋಗಿ ಅಲ್ಲಿಯವರಿಗೆ ಕೈ ತುತ್ತು ಊಟ ಕೊಡೋಣ ಎಂದು ಕುಸುಮಾ ಹೇಳಿದ್ದಾರೆ. ಅದರಂತೆ ಕಾರ್‌ನಲ್ಲಿ ಭಾಗ್ಯ, ಕುಸುಮಾ ಮತ್ತು ಸುಂದರಿ ಕನ್ನಿಕಾ ಆಫೀಸ್‌ಗೆ ಹೋಗಿದ್ದಾರೆ.

ಅಲ್ಲಿ ಕನ್ನಿಕಾ ಬಂದಿರುವುದಿಲ್ಲ. ಅಷ್ಟರಲ್ಲಿ ಊಟದ ಸಮಯವಾಗಿದೆ, ಎಲ್ಲರನ್ನೂ ಕರೆದುಕೊಂಡು ಕುಸುಮಾ ಮತ್ತು ಭಾಗ್ಯ, ಕೆಫೆಟೇರಿಯಾಗೆ ಹೋಗಿದ್ದಾರೆ. ಅಲ್ಲಿ ಕನ್ನಿಕಾ ಆಫೀಸ್‌ನ ಎಲ್ಲರಿಗೂ ತಾವು ಮನೆಯಿಂದ ತಂದಿದ್ದ ಊಟವನ್ನು ಹಂಚಿದ್ದಾರೆ. ಅಷ್ಟರಲ್ಲಿ ಆಫೀಸ್‌ಗೆ ಕನ್ನಿಕಾಳ ಎಂಟ್ರಿ ಆಗಿದೆ. ಕನ್ನಿಕಾ ಬಂದಿದ್ದೇ ತಡ ಕುಸುಮಾ ಬಾಯಿಗೆ ಬಂದಂತೆ ಕನ್ನಿಕಾಳಿಗೆ ಎಲ್ಲರ ಮುಂದೆಯೇ ಬೈದಿದ್ದಾಳೆ.



ನಿಮ್ಮ ಬಾಸ್ ಇದ್ದಾಳಲ್ಲ ಕನ್ನಿಕಾ ಇವರ ಅಂಡರ್​ನಲ್ಲಿ ನೀವು ಕೆಲಸ ಮಾಡಿದ್ರೆ ನಿಮ್ಮ ಜೀವನ, ದೊಡ್ಡ ದೊಡ್ಡ ಕನಸೆಲ್ಲ ಕನಸಾಗಿಯೇ ಉಳಿದುಬಿಡುತ್ತೆ.. ಇವಳು ಒಳ್ಳೆಯವಳಲ್ಲ.. ತುಂಬಾ ಕೆಟ್ಟವಳು.. ಎಲ್ಲರ ಜೀವನ ಹಾಳು ಮಾಡ್ತಾಳೆ, ಇನ್ನೊಬ್ಬರ ಮನೆಗೆ ಕನ್ನ ಹಾಕುತ್ತಾಳೆ. ಈ ಮನೆಹಾಳಿನ ನೀವು ನಬ್ಬಿಂದ್ರೆ ನಿಮ್ಮ ಜೀವನ ಉದ್ದಾರ ಆಗಲ್ಲ. ಆದಷ್ಟು ಬೇಗ ಬೇರೆ ಕೆಲಸ ನೋಡಿಕೊಂಡು ಈ ಜಾಗ ಖಾಲಿ ಮಾಡಿ ಎಂದು ಹೇಳಿದ್ದಾಳೆ ಕುಸುಮಾ.

ಕುಸುಮಾಳ ಮಾತಿನಿಂದ ಕೆರಳಿದ ಕನ್ನಿಕಾ, ಏಯ್.. ದೊಡ್ಡವರು ಅಂತ ಮರ್ಯಾದೆ ಕೊಟ್ಟು ಮಾತಾಡ್ತಾ ಇದ್ದೇನೆ.. ಅದನ್ನು ಉಳಿಸಿಕೊಳ್ಳಿ.. ಇಲ್ಲಾಂದ್ರೆ.. ಎಂದು ಹೇಳುತ್ತಾಳೆ. ಅತ್ತೆಗೆ ಕೈ ತೋರಿಸಿ ಮಾತನಾಡಿದ್ದಕ್ಕೆ ಭಾಗ್ಯಾಗೆ ಸಿಟ್ಟು ಬಂದಿದೆ. ನೇರವಾಗಿ ಕನ್ನಿಕಾ ಎದುರು ಬಂದ ಭಾಗ್ಯ, ಇಲ್ಲಾಂದ್ರೆ ಏನು ಮಾಡ್ತೀಯಾ? ನಿನ್ಗೆ ಸಾವಿರ ಸಲ ಹೇಳಿದ್ದೀನಿ ನನ್ನ ಅತ್ತೆ ಮುಂದೆ ಮಾತನಾಡೊವಾಗ ನಾಲಿಗೆ ಬಿಗಿ ಹಿಡಿದು ಮಾತಾಡು ಅಂತ.. ಅರ್ಥ ಆಗಲ್ವಾ ನಿನ್ಗೆ ಎಂದು ಗದರಿಸಿದ್ದಾಳೆ. ಇಲ್ಲಿಗೆ ಎಪಿಸೋಡ್ ಮುಕ್ತಾಯಗೊಂಡಿದ್ದು, ಮುಂದಿನ ಸಂಚಿಕೆಯಲ್ಲಿ ಏನೆಲ್ಲ ಆಗುತ್ತೆ ಎಂಬುದು ನೋಡಬೇಕಿದೆ.

Bhagya Lakshmi Serial: ಹಿಮಾಲಯದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾಳೆ ಭಾಗ್ಯಕ್ಕ