ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Seetha Rama: ಸೀತಾ ರಾಮ ಧಾರಾವಾಹಿ ದಿಢೀರ್ ಮುಗಿಸಿದ್ದು ಏಕೆ?: ಸತ್ಯ ಬಿಚ್ಚಿಟ್ಟ ಪೂಜಾ ಲೋಕೇಶ್

ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿ ಪಾತ್ರದ ಮೂಲಕ ಪೂಜಾ ಲೋಕೇಶ್ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಇವರದ್ದು ವಿಲನ್ ಪಾತ್ರವಾದರೂ ಆವರ ನಟನೆಗೂ ಎಲ್ಲರೂ ಮನಸೋತಿದ್ದರು. ಇದೀಗ ಇವರು ಖಾಸಗಿ ವೆಬ್ಸೈಟ್ ಒಂದಕ್ಕೆ ಸೀತಾ ರಾಮ ಧಾರಾವಾಹಿ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

ಸೀತಾ ರಾಮ ಧಾರಾವಾಹಿ ದಿಢೀರ್ ಮುಗಿಸಿದ್ದು ಏಕೆ?

Pooja Lokesh

Profile Vinay Bhat May 31, 2025 7:14 AM

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿ (Seetha Rama Serial) ಕೊನೆಗೊಂಡಿದೆ. ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ಸೀತಾ ರಾಮ ಧಾರಾವಾಹಿ ಮೂಡಿ ಬಂದಿತ್ತು. 2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭವಾಗಿ ನಿನ್ನೆಗೆ ಮುಕ್ತಾಯಕಂಡಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಯಲ್ಲಿ ಗಗನ್‌ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್‌, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್‌, ಪೂಜಾ ಲೋಕೇಶ್‌, ಜಯದೇವ್‌ ಮೋಹನ್‌, ಅಶೋಕ್‌ ಶರ್ಮಾ, ರೀತು ಸಿಂಗ್‌ ನೇಪಾಳ, ಪೂರ್ಣಚಂದ್ರ ಮುಂತಾದವರು ಭಾಗವಹಿಸಿದ್ದರು.

ಈ ಧಾರಾವಾಹಿಯಲ್ಲಿ ಭಾರ್ಗವಿ ಪಾತ್ರದ ಮೂಲಕ ಪೂಜಾ ಲೋಕೇಶ್ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಇವರದ್ದು ವಿಲನ್ ಪಾತ್ರವಾದರೂ ಆವರ ನಟನೆಗೂ ಎಲ್ಲರೂ ಮನಸೋತಿದ್ದರು. ಇದೀಗ ಇವರು ಖಾಸಗಿ ವೆಬ್​ಸೈಟ್ ಒಂದಕ್ಕೆ ಸೀತಾ ರಾಮ ಧಾರಾವಾಹಿ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಸೀತಾ ರಾಮ ಧಾರಾವಾಹಿ ಕೊನೆಗೊಂಡಿದ್ದು ಯಾಕೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

"ಸೀತಾ ರಾಮ ಧಾರಾವಾಹಿ ಮರೆಯಲಾಗ ಒಂದೊಳ್ಳೆ ಜರ್ನಿ. ನೆಗೆಟಿವ್ ರೋಲ್‌ನಲ್ಲಿ ಕನ್ನಡದವ್ರು ನನ್ನನ್ನು ನೋಡಿರಲಿಲ್ಲ. ಕೆಲವರು ವಾಹ್ ಹೀಗೂ ಮಾಡಬಹುದಾ? ಎಂದು ಕೆಟ್ಟ ಕಾಮೆಂಟ್ ಮಾಡುತ್ತಲೇ ನನ್ನ ನಟನೆಯನ್ನು ಮೆಚ್ಚಿದ್ದರು. ದ್ವೇಷಿಸಬಹುದು, ಆದ್ರೆ ಕಡೆಗಣಿಸೋಕೆ ಆಗೊಲ್ಲ ಎನ್ನುವಂತೆ ಈ ಪಾತ್ರ ಇತ್ತು" ಎಂದು ಪೂಜಾ ಲೋಕೇಶ್ ಹೇಳಿದ್ದಾರೆ.

ಧಾರಾವಾಹಿ ಮುಕ್ತಾಯದ ಬಗ್ಗೆ ಮಾತನಾಡಿದ ಅವರು, ‘‘ದಿಢೀರ್ ಧಾರಾವಾಹಿ ಮುಗಿಸಿದ್ದು ಚಾನಲ್ ನಿರ್ಧಾರ. ನಾವು ಕಲಾವಿದರು ಮಾತ್ರ. ಜನ ಎಲ್ಲಿಯವರೆಗೂ ಸ್ವೀಕರಿಸುತ್ತಾರೋ ಅಲ್ಲಿಯವರೆಗೂ ಮುಂದುವರೆಸಬೇಕು ಎಂದುಕೊಂಡಿದ್ದೆವು. ಖಂಡಿತ ಬೇಸರವಾಗುತ್ತದೆ. ಝೀ ಕನ್ನಡ ವಾಹಿನಿ ನಿರ್ಮಿಸಿದ ಮೊದಲ ಪ್ರಾಜೆಕ್ಟ್ ಇದು. ಬಹಳ ವೇಗವಾಗಿ ಹೋಗುತ್ತಿದ್ದದ್ದು ದಿಢೀರ್ ಮುಗಿಸುತ್ತಿದ್ದಾರೆ ಎಂದು ಎಲ್ಲ ಕಲಾವಿದರಿಗೂ ಬೇಸರವಾಗುತ್ತದೆ. ಇದೇ ಜೀವನ ಅಲ್ಲವೇ. ಇದನ್ನು ಮುಗಿಸಿ ಹೊಸ ಅಧ್ಯಾಯ ಆರಂಭಿಸಬೇಕು’’ ಎಂದು ಪೂಜಾ ತಿಳಿಸಿದ್ದಾರೆ.

Maja Talkies: ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ದಿಢೀರ್ ಮುಕ್ತಾಯ: ಕಾರಣವೇನು?

ಸೀತಾ ರಾಮ ಧಾರಾವಾಹಿಯಿಂದ ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ವೈಷ್ಣವಿ, ಮೇಘನಾ, ಸಿಂಧೂ, ಪೂರ್ಣ, ಜೈದೇವ್, ಚಂದ್ರು ಅಂಕಲ್, ಗಗನ್, ಸಿಹಿ, ನನ್ನ ಮಗನಾಗಿ ಮಾಡಿದ್ದ ಅನಿ, ಅಶೋಕ್ ಹೀಗೆ ಎಲ್ಲರೂ ಒಳ್ಳೆ ಸ್ನೇಹಿತರಾಗಿದ್ದೆವು. ಫ್ಯಾಮಿಲಿ ರೀತಿ ಇದ್ದೆವು. ಒಟ್ಟಿಗೆ ಕೂತು ಊಟ ಮಾಡುವುದು, ವಾಟ್ಸಪ್ ಗ್ರೂಪ್ ಮಾಡಿಕೊಂಡು ಚರ್ಚಿಸುತ್ತಿದ್ದೆವು. ಮುಂದೆ ಕೂಡ ನಮ್ಮ ಗೆಳೆತನ ಹೀಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.