Ravichandran: ಭರ್ಜರಿ ಬ್ಯಾಚುಲರ್ಸ್ನಲ್ಲಿ ರವಿಚಂದ್ರನ್ ಹುಟ್ಟುಹಬ್ಬ: ಸುಧಾರಾಣಿ-ಮಾಲಾಶ್ರೀ ಜೊತೆ ಕ್ರೇಜಿಸ್ಟಾರ್ ಭರ್ಜರಿ ಸ್ಟೆಪ್
ರವಿಚಂದ್ರನ್ ಮೇ 30 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೀಗಿರುವಾಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಮುಂಚಿತವಾಗಿಯೇ ಕ್ರೇಜಿ ಸ್ಟಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈ ವೇಳೆ ನಟಿ ಸುಧಾರಾಣಿ ಮತ್ತು ಕನಸಿನ ರಾಣಿ ಮಾಲಾಶ್ರೀ ಅವರು ರವಿಚಂದ್ರನ್ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ದಾರೆ.

Ravichandran Bithday

ಝೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ (Bharjari Bachelors) ಸೀಸನ್ 2 ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಪ್ರತಿವಾರ ಒಂದಲ್ಲ ಒಂದು ವಿಭಿನ್ನ ಕಾನ್ಪೆಪ್ಟ್ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಈ ಶೋನಲ್ಲಿ ರಚಿತಾ ರಾಮ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಜಡ್ಜಸ್ ಆಗಿದ್ದಾರೆ. ಇದೀಗ ಈ ವಾರ ವೇದಿಕೆ ಮೇಲೆ ರವಿಮಾಮನ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಆಚರಿಸಲಾಗಿದೆ.
ರವಿಚಂದ್ರನ್ ಮೇ 30 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೀಗಿರುವಾಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ಮುಂಚಿತವಾಗಿಯೇ ಕ್ರೇಜಿ ಸ್ಟಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈ ವೇಳೆ ನಟಿ ಸುಧಾರಾಣಿ ಮತ್ತು ಕನಸಿನ ರಾಣಿ ಮಾಲಾಶ್ರೀ ಅವರು ರವಿಚಂದ್ರನ್ಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ದಾರೆ.
ರವಿಚಂದ್ರನ್ ಜೊತೆಯಲ್ಲಿ ಸುಧಾರಾಣಿ ಮನೆದೇವ್ರು ಸಿನಿಮಾದಲ್ಲಿ ನಟಿಸಿದ್ದರು. ಹಾಗೇ ಮಾಲಾಶ್ರೀ ರಾಮಾಚಾರಿಯಲ್ಲಿ ನಾಯಕಿಯಾಗಿದ್ದರು. ಈ ಇಬ್ಬರೂ ನಾಯಕಿಯರು ಭರ್ಜರಿ ಬ್ಯಾಚುಲರ್ ವೇದಿಕೆ ಮೇಲೆ ಕ್ರೇಜಿಸ್ಟಾರ್ ಜೊತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಚುಲರ್ಸ್ ಮತ್ತು ಏಂಜಲ್ಸ್ ರವಿಚಂದ್ರನ್ ಅವರಿಗಾಗಿ ಸ್ಪೆಷಲ್ ಆಗಿ ಹಾಡು ಹಾಡಿದ್ದಾರೆ. ಅವರ ಹಾಡುಗಳಿಗೆ ಭರ್ಜರಿ ಸ್ಟೆಪ್ ಕೂಡ ಹಾಕಿದ್ದಾರೆ. ಒಂದಲ್ಲ ಒಂದು ಸರ್ಪ್ರೈಸ್ ನೀಡುವ ಬ್ಯಾಚುಲರ್ಸ್ ವೇದಿಕೆ ರವಿಚಂದ್ರನ್ ಅವರ ಬರ್ತ್ಡೇ ಗೆ ವಿಭಿನ್ನವಾಗಿಯೇ ಸರ್ಪ್ರೈಸ್ ನೀಡಿದೆ.
ಇನ್ನು ರವಿಚಂದ್ರನ್ ಹುಟ್ಟುಹಬ್ಬಕ್ಕೆ ಝೀ ಕನ್ನಡ ವಿಶೇಷವಾಗಿ ಆಚರಣೆ ಮಾಡಿದೆ. 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರವಿಚಂದ್ರನ್ಗೆ 64 ಮಕ್ಕಳಿಂದ ಗಾಯನ ಕೂಡ ಇದೆ. ಕರುನಾಡ ತಾಯಿ ಸದಾ ಚಿನ್ಮಯಿ ಎನ್ನುವ ಹಾಡನ್ನು 64 ಪುಟಾಣಿ ಮಕ್ಕಳು ಕ್ರೇಜಿಸ್ಟಾರ್ ರವಿಚಂದ್ರನ್ ಮುಂದೆ ಹಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇದು ಕೂಡ ಭರ್ಜರಿ ಬ್ಯಾಚುಲರ್ಸ್ ಶೋನ ಮತ್ತೊಂದು ಹೈಲೈಟ್.
ಇದನ್ನೆಲ್ಲ ಕಂಡು ರವಿಚಂದ್ರನ್ ಖುಷಿಯಾಗಿದ್ದಾರೆ. ಈ ವೇಳೆ ತಮ್ಮ ತಂದೆ ತಾಯಿಯನ್ನು ಕೂಡ ರವಿಚಂದ್ರನ್ ನೆನಪಿಸಿಕೊಂಡರು. "ಅಪ್ಪ ಅಮ್ಮ ಇದ್ದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದರೋ ಗೊತ್ತಿಲ್ಲ" ಎಂದು ಕ್ರೇಜಿ ಸ್ಟಾರ್ ಹೇಳಿದ್ದಾರೆ.
Maja Talkies: ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ದಿಢೀರ್ ಮುಕ್ತಾಯ: ಕಾರಣವೇನು?