ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Yogesh gowda Murder Case: ಯೋಗೇಶ್‌ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಆದೇಶ

ಯೋಗೇಶ್‌ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್‌ ಆದೇಶ

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್‌ ಇನ್ಸ್‌ಪೆಕ್ಟರ್ ಚೆನ್ನಕೇಶವ ಟಿಂಗರಿಕರ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗದೇ ಇದ್ದರೂ, ಸಾಕ್ಷ್ಯ ನಾಶಕ್ಕೆ ಯತ್ನ ಹಾಗೂ ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆ ಕೋರ್ಟ್‌ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇನ್ನುಳಿದಂತೆ ಬಸವರಾಜ್‌ ಮುತ್ತಗಿಗೆ ಮಾಫಿ ಸಾಕ್ಷಿ ಸ್ಥಾನ ಖಚಿತಪಡಿಸಿದೆ.

Yogesh Gowda murder case: ಯೋಗೇಶ್‌ ಗೌಡ ನೆನೆದು ಅಕ್ಕ ಕಣ್ಣೀರು; ಕೋರ್ಟ್‌ ತೀರ್ಪಿನ ಬಗ್ಗೆ ಹೇಳಿದ್ದೇನು?

ಕೋರ್ಟ್‌ ತೀರ್ಪಿನ ಬಳಿಕ ಯೋಗೇಶ್‌ ಗೌಡ ನೆನೆದು ಅಕ್ಕ ಕಣ್ಣೀರು

ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಯೋಗೇಶ್‌ ಗೌಡ ಸಹೋದರಿ ಅಕ್ಕಮಹಾದೇವಿ ಅವರು, ನಮಗೆ ಕಾನೂನಿನ ಮೇಲೆ ಭರವಸೆ ಇತ್ತು. ಕೋರ್ಟ್‌ ತೀರ್ಪಿನಿಂದ ನಮಗೆ ಖುಷಿಯಾಗಿದೆ, ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಪೊಲೀಸ್‌ ಅಧಿಕಾರಿ ಚನ್ನಕೇಶವ ಟಿಂಕರಿಕರ್‌ಗೂ ಜೀವಾವಧಿ ಶಿಕ್ಷೆಯಾಗಬೇಕಿತ್ತು ಎಂದು ಹೇಳಿದ್ದಾರೆ.

MLA Vinay Kulkarni: ಜೈಲುಪಾಲಾದ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಮುಂದಿರುವ ಆಯ್ಕೆಗಳೇನು?

ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು; ಮುಂದಿರುವ ಆಯ್ಕೆಗಳೇನು?

Yogesh Gowda murder case: ಕೊಲೆ, ಹಾಗೂ ಒಳಸಂಚು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಜೈಲು ಶಿಕ್ಷೆ ನೀಡಲಾಗಿದ್ದು, ಇದೀಗ ವಿನಯ್ ಕುಲಕರ್ಣಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಶಾಸಕನ ಮುಂದಿರುವ ಆಯ್ಕೆಗಳೇನು ಎಂಬ ಮಾಹಿತಿ ಇಲ್ಲಿದೆ.

ನನ್ನ ಮತ್ತು ಸಿದ್ದರಾಮಯ್ಯ ಗುಂಪು ಅಂಥ ಎಲ್ಲಿದೆ? ಎಲ್ಲರೂ ನಮ್ಮ ಶಾಸಕರೇ ಎಂದ ಡಿ.ಕೆ. ಶಿವಕುಮಾರ್

ನನ್ನ ಮತ್ತು ಸಿದ್ದರಾಮಯ್ಯ ಗುಂಪು ಅಂಥ ಎಲ್ಲಿದೆ?: ಡಿ.ಕೆ. ಶಿವಕುಮಾರ್

DK Shivakumar: ನಿಮ್ಮ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾ ಇದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಯಾವ ಹೇಳಿಕೆಯೂ ಇಲ್ಲ. ಯಾವ ಗುಂಪೂ ಇಲ್ಲ. 139 ಶಾಸಕರು ನನ್ನದೇ ಗುಂಪು. ಕಾಂಗ್ರೆಸ್ ಗುಂಪು. ನಮಗೆ ಪಕ್ಷ ಹಾಗೂ ಪಕ್ಷದ ಹಿತ ಮುಖ್ಯ. ಪಕ್ಷದ ಅಭಿವೃದ್ಧಿಗೆ ಹಾಗೂ ಅದರ ಒಳಿತಿಗೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ, ಮಾಡುತ್ತೇವೆʼ ಎಂದು ಹೇಳಿದ್ದಾರೆ.

ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಕಳೆದ 10 ವರ್ಷಗಳಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ವಿನಯ್ ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ಎಂದು ಜನಪ್ರತಿನಿಧಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ಬುಧವಾರ ತೀರ್ಪು ಪ್ರಕಟಿಸಿದ್ದರು. ಸದ್ಯ ವಿನಯ್‌ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ.

Ranya Rao case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ಗೆ ಹಿನ್ನಡೆ; ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ನಟಿ ರನ್ಯಾ ರಾವ್‌ಗೆ ಹಿನ್ನಡೆ; ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

gold smuggling case: ಚಿನ್ನ ಕಳ್ಳಸಾಗಣೆ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ ಬಂಧನ ಆದೇಶವನ್ನು 2025ರ ಡಿ.19ರಂದು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಆರೋಪಿಗಳ ಪರ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಇದರಿಂದ ನಟಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ

ಹೊಸ ವಿನ್ಯಾಸದ ನವೀಕರಣದೊಂದಿಗೆ ಯಮಹಾ ಫ್ಯಾಸಿನೊ

ಕಾರ್ಯಕ್ಷಮತೆ ಮತ್ತು ದಕ್ಷತೆಯ ವಿಷಯದಲ್ಲಿ ಫ್ಯಾಸಿನೊದ ಡಿಎನ್‌ಎಯನ್ನು ಉಳಿಸಿಕೊಂಡಾಗ, ಹೆಚ್ಚು ಸಂಸ್ಕರಿಸಿದ ಮತ್ತು ಸಮಕಾಲೀನ ಶೈಲಿಯನ್ನು ವ್ಯಕ್ತಪಡಿಸಲು ವಿನ್ಯಾಸವನ್ನು ಮತ್ತಷ್ಟು ವರ್ಧಿಸಲಾಗಿದೆ, ಇದು ಚಲನೆಯಲ್ಲಿ ಮತ್ತು ವಿಶ್ರಾಂತಿಯಲ್ಲಿ ಎದ್ದು ಕಾಣುತ್ತದೆ ಎಂದು ಖಚಿತ ಪಡಿಸುತ್ತದೆ. ಹೊಸ ಡೆಕಲ್‌ಗಳನ್ನು ಒಳಗೊಂಡಂತೆ ಈ ವರ್ಧನೆಗಳನ್ನು ಭಾರತದಲ್ಲಿ ಯಮಹಾದ ಆರ್ & ಡಿ ತಂಡವು ಪರಿಕಲ್ಪನೆ ಮಾಡಿ ವಿನ್ಯಾಸಗೊಳಿಸಿದೆ.

Voice Clinic: ನುಂಗುವಿಕೆ, ಉಸಿರಾಟ(ಶ್ವಾಸ) ಮಾರ್ಗ ಮತ್ತು ಧ್ವನಿ ಪೆಟ್ಟಿಗೆ ಅಸ್ವಸ್ಥತೆಗಳಿಗೆ ಸಮಗ್ರ ಆರೈಕೆ: ವಿಶ್ವ ಧ್ವನಿ ದಿನದಂದು 'ಸ್ವರ ಕ್ಲಿನಿಕ್'  ಆರಂಭ

ವಿಶ್ವ ಧ್ವನಿ ದಿನದಂದು 'ಸ್ವರ ಕ್ಲಿನಿಕ್' ಆರಂಭ

ನ್ಯಾರೋ ಬ್ಯಾಂಡ್ ಇಮೇಜಿಂಗ್(ಎನ್‌ಬಿಐ)ನೊಂದಿಗೆ ಲಾರಿಂಗೋಸ್ಕೋಪಿ, ಸ್ಟ್ರೋಬೋಸ್ಕೋಪಿ, ಬ್ರಾಂಕೋಸ್ಕೋಪಿ ಮತ್ತು ನುಂಗುವಿಕೆಯ ಸಮಸ್ಯೆಗಳಿಗೆ ಕ್ರಿಯಾತ್ಮಕ ಎಂಡೋಸ್ಕೋಪಿಕ್ ಮೌಲ್ಯ ಮಾಪನ ಸೇರಿದಂತೆ ಸುಧಾರಿತ ಒಪಿಡಿ-ಆಧಾರಿತ ರೋಗ ಪತ್ತೆ ಮೂಲಕ ಎಲ್ಲಾ ವಯಸ್ಸಿನ ರೋಗಿ ಗಳಿಗೆ ಚಿಕಿತ್ಸೆ ನೀಡಲು ಈ ಕ್ಲಿನಿಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

ವಿದ್ಯುತ್ ಮಾರ್ಗಗಳಾಚೆಗೆ: ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆಗೆ ಹೇಗೆ ಬಲ ಸಿಗುತ್ತಿದೆ?

ನವೀಕರಿಸಬಹುದಾದ ಇಂಧನ ಯೋಜನೆ: ಗ್ರಾಮೀಣ ಆರ್ಥಿಕತೆಗೆ ಹೇಗೆ ಬಲ ಸಿಗುತ್ತಿದೆ?

ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದ ತ್ವರಿತ ವಿಸ್ತರಣೆಯಿಂದಾಗಿ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ರಾಷ್ಟ್ರೀಯ ಗ್ರಿಡ್ಗೆ ಜೋಡಿಸುವ ಬೃಹತ್ ಪ್ರಸರಣಾ ಜಾಲಗಳ ಅಗತ್ಯ ಸೃಷ್ಟಿಯಾಗಿದೆ. ‘ರೆಸೋನಿಯಾ’ (Resonia) ದಂತಹ ಕಂಪನಿಗಳು, ಹೆಚ್ಚಾಗಿ ಕೃಷಿ ಭೂಮಿಯನ್ನೇ ಹೊಂದಿರುವ ಹಲವು ಪ್ರದೇಶಗಳಲ್ಲಿ ಇಂತಹ ಜಾಲಗಳನ್ನು ಅಭಿವೃದ್ಧಿ ಪಡಿಸುತ್ತಿವೆ.

Yadgir accident: ಯಾದಗಿರಿ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆ; ಸಿರವಾರ ಪಟ್ಟಣ ಪಂಚಾಯತ್ ಸದಸ್ಯನ ಕುಟುಂಬದ 6 ಮಂದಿ ಸಜೀವ ದಹನ

Yadgir accident: ಯಾದಗಿರಿ ಅಪಘಾತದಲ್ಲಿ ಮೃತಪಟ್ಟವರ ವಿವರ ಇಲ್ಲಿದೆ

ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಶುಕ್ರವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿತ್ತು. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಇದರಿಂದ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

Bus Caught fire: ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ದೊಡ್ಡ ಅನಾಹುತ

ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ದೊಡ್ಡ ಅನಾಹುತ

ಮುರುಡೇಶ್ವರ ದೇವಸ್ಥಾನ ರಸ್ತೆಯಲ್ಲಿ ದೂರವಾಣಿ ಕೇಂದ್ರದ ಎದುರುಗಡೆ ಸಾಗುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದೆ. ಈ ಬಸ್ ವಾಯುವ್ಯ ಕರ್ನಾಟಕ ಸಾರಿಗೆ ವಿಭಾಗಕ್ಕೆ ಸೇರಿದ್ದು, ಕುಮಟಾದಿಂದ ಭಟ್ಕಳ ಮಾರ್ಗವಾಗಿ ಮುರುಡೇಶ್ವರ ಬಸ್ ನಿಲ್ದಾಣದತ್ತ ಸಾಗುತ್ತಿತ್ತು.

ಪ್ಲಂಬೆಕ್ಸ್ ಇಂದಿಯಾ 2026ಕ್ಕೆ ಇಂದು ಚಾಲನೆ, ನೀರಿನ ಭದ್ರತೆ ಮತ್ತು ಸುಸ್ಥಿರ ನಗರ ವ್ಯವಸ್ಥೆಗಳಿಗೆ ಆದ್ಯತೆ

ಪ್ಲಂಬೆಕ್ಸ್ ಇಂದಿಯಾ 2026ಕ್ಕೆ ಇಂದು ಚಾಲನೆ

ಮೊದಲ ದಿನದಲ್ಲಿ ನಗರದ ಪ್ರಮುಖ ನೀರಿನ ಸವಾಲುಗಳು ಮತ್ತು ನೀತಿಯ ಚೌಕಟ್ಟುಗಳ ಕುರಿತು ಬೆಳಕು ಚೆಲ್ಲಲಾಯತು. ವಿಕಾಸ್ ಬ್ರಹ್ಮಾವರ್ (ಟ್ರಾನ್ಸ್ ವಾಟರ್ ಸಿಸ್ಟಂ ಪ್ರೈ.ಲಿ.), ಡಾ.ಶಿಹಾಬುದ್ದೀನ್ ಎ. ಮಳಿಯೆಕ್ಕಲ್ (ಐಐಟಿ ತಿರುಪತಿ), ಡಾ. ಪ್ರಮೋದ್ ಕುಮಾರ್ (ಐಐಎಸ್ಸಿ, ಬೆಂಗಳೂರು) ಮತ್ತು ಆರ್ಕಿಟೆಕ್ಟ್ ವಿ. ವಿಶ್ವನಾಥ್ (ವೈವಿ ಆರ್ಕಿಟೆಕ್ಟ್ಸ್) ಒಳನೋಟಯುಕ್ತ ಚರ್ಚೆಗಳನ್ನು ನಡೆಸಿದರು.

'ಬ್ರಾಹ್ಮಣರ ಕಾಫಿ ಬಾರ್‌'ನ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆ

'ಬ್ರಾಹ್ಮಣರ ಕಾಫಿ ಬಾರ್‌'ನ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆ

ಬೆಂಗಳೂರಿನಲ್ಲಿ ʼಬ್ರಾಹ್ಮಣರ ಕಾಫಿ ಬಾರ್‌ʼ ಎಲ್ಲಿದೆ ಎಂದು ಆಹಾರಪ್ರಿಯರಿಗೆ ಎಲ್ಲರಿಗೂ ಗೊತ್ತು. ಅಂಥ ಯಶಸ್ವಿ ಮತ್ತು ರುಚಿಕರ ಹೋಟೆಲ್‌ ಉದ್ಯಮವನ್ನು ಕಟ್ಟಿದ ರಾಧಾಕೃಷ್ಣ ಅಡಿಗರ ಜೀವನ ಕಥನ ಏ.19ರಂದು ಬಿಡುಗಡೆಯಾಗಲಿದೆ. ನ್ಯಾ.ದೇವದಾಸ್‌, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌, ಗೃಹ ಸಚಿವ ಜಿ ಪರಮೇಶ್ವರ್‌, ಸಂಸದ ತೇಜಸ್ವಿ ಸೂರ್ಯ ಮೊದಲಾದವರು ಭಾಗವಹಿಸಲಿದ್ದಾರೆ.

ʼಧರ್ಮಶ್ರೀʼಗೆ 65 ವರ್ಷ! ಏ.18ರಂದು ಬೆಂಗಳೂರಿನಲ್ಲಿ ಭೈರಪ್ಪ ಸಾಹಿತ್ಯ ಸ್ಮರಣೆ

ʼಧರ್ಮಶ್ರೀʼಗೆ 65 ವರ್ಷ! ನಾಳೆ ಬೆಂಗಳೂರಿನಲ್ಲಿ ಭೈರಪ್ಪ ಸಾಹಿತ್ಯ ಸ್ಮರಣೆ

ಧರ್ಮಶ್ರೀ ಕಾದಂಬರಿ ಎಸ್‌ ಎಲ್‌ ಭೈರಪ್ಪ ಅವರ ಮಹತ್ವದ ಕಾದಂಬರಿಗಳಲ್ಲಿ ಒಂದಾಗಿದ್ದು, ಅದನ್ನು ಅವರು ಬರೆದು 65 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಷನಲ್‌ ಕಾಲೇಜ್‌ ಸಭಾಂಗಣದಲ್ಲಿ ಏ.18ರಂದು ಶನಿವಾರ ಸಂಜೆ 5 ಗಂಟೆಗೆ ಎಸ್‌ ಎಲ್‌ ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುಂದಿನ ಜನರೇಶನ್ ಇಂಟ್ರಾಓಕ್ಯುಲರ್ ಲೆನ್ಸ್ ಅನ್ನು ಪರಿಚಯಿಸಿದ ಜಾನ್ಸನ್ ಮತ್ತು ಜಾನ್ಸನ್

ಇಂಟ್ರಾಓಕ್ಯುಲರ್ ಲೆನ್ಸ್ ಅನ್ನು ಪರಿಚಯಿಸಿದ ಜಾನ್ಸನ್ ಮತ್ತು ಜಾನ್ಸನ್

ಹೊಸ ಫುಲ್ ವಿಸುವಲ್ ರೇಂಜ್*1 ಐಓಎಲ್ ಉನ್ನತ ಗುಣಮಟ್ಟದ ಹಾಗೂ ನಿರಂತರ ದೃಷ್ಟಿಯನ್ನು, ಸಾಟಿಯಿಲ್ಲದ ಶ್ರೇಣಿಯೊಂದಿಗೆ ಒದಗಿಸುತ್ತದೆ$6,16 ಇದರಿಂದ ರೋಗಿಗಳು ದೂರದಿಂದ ಹತ್ತಿರದವರೆಗೆ ಹಾಗೂ ಮಧ್ಯಂತರ ದೂರಗಳಲ್ಲೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ ಮತ್ತು ಕನ್ನಡಕದ ಅವಶ್ಯಕತೆ ಕಡಿಮೆಯಾಗುತ್ತದೆ.‡+2,6,7 ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟೆಕ್ನಿಸ್ ಪ್ಲಾಟ್‌ ಫಾರ್ಮ್ ಮೇಲೆ ತಯಾರಿಸಲಾಗಿದ್ದು, ಸುಧಾರಿತ ಆಪ್ಟಿಕ್ಸ್ ಮತ್ತು ಸ್ವಂತ ವಸ್ತುಗಳನ್ನು ಹೊಂದಿರುವ ಟೆಕ್ನಿಸ್ ಒಡಿಸ್ಸಿ ಐಓಎಲ್ ಸದಾ ಸ್ಪಷ್ಟ ಮತ್ತು ಹೈ-ಕಾಂಟ್ರಾಸ್ಟ್ ದೃಷ್ಟಿಯನ್ನು ಒದಗಿಸುತ್ತದೆ

ವಿಪ್ರೋದಿಂದ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

ವಿಪ್ರೋದಿಂದ ಮಾರ್ಚ್ 31ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶಗಳ ಪ್ರಕಟ

ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೋ ಲಿಮಿ ಟೆಡ್ (ಎನ್.ವೈ.ಎಸ್.ಇ.: ಡಬ್ಲ್ಯೂ.ಐ.ಟಿ., ಬಿ.ಎಸ್.ಇ: 507685, ಎನ್.ಎಸ್.ಇ.: ವಿಪ್ರೊ) ಮಾರ್ಚ್ 31,2026ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂಟರ್ನ್ಯಾಷ ನಲ್ ಫೈನಾನ್ಷಿ ಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ (ಐ.ಎಫ್.ಆರ್.ಎಸ್.) ಅಡಿಯಲ್ಲಿ ಪ್ರಕಟಿಸಿದೆ.

ಅಧಿಕಾರಿಗಳ ಕಿತ್ತಾಟ: ನಿರೀಕ್ಷೆಯಂತೆ ನಡೆಯದ ಕೆಲಸ

ಅಧಿಕಾರಿಗಳ ಕಿತ್ತಾಟ: ನಿರೀಕ್ಷೆಯಂತೆ ನಡೆಯದ ಕೆಲಸ

ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕೆಲ ಅಧಿಕಾರಿಗಳಿಗೆ, ಯಾವುದೇ ತಾಂತ್ರಿಕ ಅರ್ಹತೆ ಹೊಂದಿಲ್ಲ. ಆದರೆ ಪ್ರಭಾವವನ್ನು ಬಳಸಿಕೊಂಡು, ಬೈಯಪ್ಪನಹಳ್ಳಿ ವಿಭಾಗದ ಉನ್ನತ ಹುದ್ದೆಗೆ ನೇಮಕಗೊಂಡಿ ದ್ದಾರೆ. ಕೆಲಸಕ್ಕೆ ಸೇರಿದ ಬಳಿಕ, ರಾಜ್ಯ ಸರಕಾರದ ಅಧೀನಕ್ಕೊಳಪಡದ ಹಿನ್ನೆಲೆ ಮೆಟ್ರೋದ ನಿಯಮಗಳು ಅನ್ವಯಿಸುವುದಿಲ್ಲ. ಕೇಂದ್ರ ಸರಕಾರದ ಅಧೀನದಲ್ಲಿ ಬರುತ್ತೇವೆ ಎಂದು ಹೇಳಿ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯಾಗುವಂತೆ ಹಾಗೂ ಕಾನೂನು ಉಲ್ಲಂಘನೆಯಾಗುವಂತೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ

Road Accident: ಯಾದಗಿರಿ ಬಳಿ ಭೀಕರ ಅಪಘಾತ, ಡಿಕ್ಕಿಯಾಗಿ ಹೊತ್ತಿ ಉರಿದ ಕಾರು- ಬಸ್ಸು, 7 ಮಂದಿ ದುರ್ಮರಣ

ಯಾದಗಿರಿ ಬಳಿ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು- ಬಸ್ಸು, 7 ಮಂದಿ ಸಾವು

ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ವಿಆರ್​ಎಲ್​​ ಖಾಸಗಿ ಬಸ್ ಹಾಗೂ ಕಲಬುರಗಿಯಿಂದ ಲಿಂಗಸೂಗೂರು ಕಡೆಗೆ ಸಾಗುತ್ತಿದ್ದ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, 7 ಮಂದಿ ಸಜೀವ ದಹನಗೊಂಡಿದ್ದಾರೆ. ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Bird flu: ಚಿಕನ್‌ ಪ್ರಿಯರೇ ಎಚ್ಚರ! ಕರ್ನಾಟಕದಲ್ಲಿ H5N1 ವೈರಸ್ ಪತ್ತೆ, ಕೋಳಿ ಸಾಕಣೆಗಾರರಿಗೆ ಕ್ವಾರಂಟೈನ್

ಚಿಕನ್‌ ಪ್ರಿಯರೇ ಎಚ್ಚರ! ಕರ್ನಾಟಕದಲ್ಲಿ H5N1 ವೈರಸ್ ಪತ್ತೆ

H5 N1 ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಹೆಸರಘಟ್ಟ ಪೌಲ್ಟ್ರಿ ಫಾರಂನಿಂದ ಇತರ ಭಾಗಗಳಿಗೆ ಕೋಳಿ ಸಾಗಣೆ ಮಾಡುವ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ H5 N1 ವೈರಸ್ ಮತ್ತಷ್ಟು ಹರಡದಂತೆ ಎಚ್ಚರ ವಹಿಸಲಾಗಿದೆ. ಸರ್ಕಾರದ ಪಶು ವೈದ್ಯಾಧಿಕಾರಿಗಳಿಂದ ಸುತ್ತಮುತ್ತ ಪಂಚಾಯಿತಿಗಳಿಗೂ ನೋಟಿಸ್ ನೀಡಲಾಗಿದೆ.

Tumkur news: ನಾಪತ್ತೆಯಾಗಿದ್ದ ಮಹಿಳೆಯ ತಲೆಬುರುಡೆ ಪತ್ತೆ, ಸಿಸಿಟಿವಿಯಲ್ಲಿ ಸಿಕ್ಕಿತು ಕೊಲೆ ಸುಳಿವು

ನಾಪತ್ತೆಯಾದ ಮಹಿಳೆಯ ತಲೆಬುರುಡೆ ಪತ್ತೆ, ಸಿಸಿಟಿವಿ ನೀಡಿತು ಕೊಲೆ ಸುಳಿವು

ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Transfer of Judges: ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ರಾಜ್ಯಾದ್ಯಂತ 365 ನ್ಯಾಯಾಧೀಶರ ವರ್ಗಾವಣೆ

ಪ್ರತಿವರ್ಷದಂತೆ ನಡೆಯುವ ಸಾಮಾನ್ಯ ವಾರ್ಷಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವರ್ಗಾವಣೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವರ್ಗಾವಣೆಗೊಂಡಿರುವ ಎಲ್ಲಾ ನ್ಯಾಯಾಧೀಶರು ಜೂನ್ 1 ರಿಂದಲೇ ಅನ್ವಯವಾಗುವಂತೆ ತಮ್ಮ ಹೊಸ ಕಾರ್ಯಕ್ಷೇತ್ರಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Prakash Raj: ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ಕಿತ್ತು ತಿಂದ: ಪ್ರಕಾಶ್‌ ರಾಜ್‌ ಹೊಸ ರಾಮಾಯಣ

ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ತಿಂದ: ಪ್ರಕಾಶ್‌ ರಾಜ್‌ ವಿವಾದ

ಶ್ರೀ ರಾಮ ಮತ್ತು ಲಕ್ಷ್ಮಣರನ್ನು ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಪ್ರಕಾಶ್ ರಾಜ್ ಹೋಲಿಸಿದ್ದಾರೆ. ಉತ್ತರ ಭಾರತದ ಕಾರ್ಮಿಕರಾದ ರಾಮ ಹಾಗೂ ಲಕ್ಷ್ಮಣರು ದಕ್ಷಿಣ ಭಾರತದ ರಾವಣದ ಮಾಲಿಕತ್ವದ ಜಮೀನಿಗೆ ಪ್ರವೇಶಿಸಿ, ಅಲ್ಲಿನ ಹಣ್ಣುಗಳನ್ನು ಕದ್ದು ತಿಂದರು ಎಂದಿದ್ದಾರೆ. ಇದು ಕೆಲವರಿಗೆ ಕೋಪ ತರಿಸಿದೆ.

IPL match ticket black market: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟಿಕೆಟ್‌ ಕಾಳಸಂತೆ ದಂಧೆ ಪತ್ತೆ, ಕ್ಯಾಂಟೀನ್‌ ನೌಕರ ಸೆರೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ‌ ಐಪಿಎಲ್ ಟಿಕೆಟ್‌ ಕಾಳಸಂತೆ ದಂಧೆ ಪತ್ತೆ

ಆರೋಪಿ ಚಂದ್ರಶೇಖರ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ನೀಡಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸದಸ್ಯ ಎನ್ನಲಾದ ಗಣೇಶ್ ಹರಿಕೇಶ್ ಎಂಬವರು ತನಗೆ ಈ ಟಿಕೆಟ್‌ಗಳನ್ನು ನೀಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆತ ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಈ ದಂಧೆಯ ಬೇರುಗಳು ಬಹಳ ಆಳವಾಗಿರುವುದು ಸ್ಪಷ್ಟವಾಗಿದೆ.

Cabinet meeting: ವಿವಿಗಳಲ್ಲಿ ರೋಹಿತ್‌ ವೇಮುಲ ಕಾಯ್ದೆ ಜಾರಿ, ಬೆಂಗಳೂರಿನಲ್ಲಿ 11 ಎಲಿವೇಟೆಡ್‌ ಕಾರಿಡಾರ್:‌ ಸಂಪುಟ ನಿರ್ಣಯ

ರೋಹಿತ್‌ ವೇಮುಲ ಕಾಯ್ದೆ, ಬೆಂಗಳೂರಿಗೆ 11 ಎಲಿವೇಟೆಡ್‌ ಕಾರಿಡಾರ್:‌ ಸಂಪುಟ

ಶಿಕ್ಷಣದಲ್ಲಿನ ತಾರತಮ್ಯ ಹಾಗೂ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ 'ಕರ್ನಾಟಕ ರೋಹಿತ್ ವೇಮುಲ (ಬಹಿಷ್ಕಾರ ಅಥವಾ ಅನ್ಯಾಯದ ತಾರತಮ್ಯ ತಡೆ ಮತ್ತು ಘನತೆಯ ಹಕ್ಕು) ವಿಧೇಯಕ' ಮಂಡನೆಗೆ ನಿನ್ನೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

Loading...