ಜನಪದ ಪರಂಪರೆಗೆ ಜೀವ ತುಂಬಿದ ಕೋಲಾಟ ಪ್ರದರ್ಶನ
ವರದನಾಯಕನಹಳ್ಳಿ, ಹನುಮಂತಪುರ, ಶಿಡ್ಲಘಟ್ಟ ಹಾಗೂ ಚೀಮನಹಳ್ಳಿ ಗ್ರಾಮಗಳ ಸುಮಾರು ಇಪ್ಪತ್ತು ಮಂದಿ ಕಲಾವಿದರು ಭಾಗವಹಿಸಿದರು. ಹಾರಹೊಳ್ಳಿಯ ಗುರುಗಳಾದ ಇ. ಮುನಿಶಾಮಪ್ಪ ಮತ್ತು ಹೆಚ್.ಎನ್. ಸುಬ್ಬರಾಯಪ್ಪ ಅವರಿಂದ ತರಬೇತಿ ಪಡೆದು, ಹನುಮಂತಪುರದ ಶ್ರೀಕೃಷ್ಣ ಸ್ವಾಮಿ ದೇವಾಲಯದ ಬಳಿ ಅಭ್ಯಾಸ ಮಾಡಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನ ನೀಡಿದರು.