ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

Davanagere South byelection: ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ; ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌ ಶೋ

ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಾಗಿದೆ.

Inspector Sandesh: ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ: ಸಚಿವ ಪರಮೇಶ್ವರ್

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪ್ರಕರಣ ಸಿಐಡಿಗೆ: ಸಚಿವ ಪರಮೇಶ್ವರ್

'ಮೂಡುಬಿದಿರೆ ಘಟನೆಯ ಕುರಿತು ಇಂದು ಕೆಲವು ಸಂತ್ರಸ್ತೆಯರು ನನ್ನನ್ನು ಭೇಟಿ ಮಾಡಿದರು. ಅವರು ನೀಡಿದ ಮಾಹಿತಿ ಮತ್ತು ಘಟನೆಗಳ ಆಧಾರದ ಮೇಲೆ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಡಿಜಿ-ಐಜಿಪಿ ಅವರಿಗೆ ಸೂಚನೆ ನೀಡಿದ್ದೇನೆ' ಎಂದು ಗೃಹ ಸಚಿವರು ತಿಳಿಸಿದ್ದಾರೆ.

Davanagere Byelection: ದಾವಣಗೆರೆಯಲ್ಲಿ ಸಮರ್ಥ ಶಾಮನೂರು ನಾಮಪತ್ರ; ಸಿಎಂ, ಡಿಸಿಎಂ ಸಾಥ್‌

ದಾವಣಗೆರೆಯಲ್ಲಿ ಸಮರ್ಥ ಶಾಮನೂರು ನಾಮಪತ್ರ; ಸಿಎಂ, ಡಿಸಿಎಂ ಸಾಥ್‌

ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಮರ್ಥ ಶಾಮನೂರು ಇಂದು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಅವರಿಗೆ ಸಿಎಂ ಸಿದ್ದರಾಮಯ್ಯ (cm siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಾಥ್‌ ನೀಡಿದರು.

Iran-israel war: ಮಧ್ಯಪ್ರಾಚ್ಯ ಸಂಘರ್ಷ; ದೇಶದಲ್ಲಿ ಪರಿಸ್ಥಿತಿ ನಿಭಾಯಿಸಲು ಪ್ರಲ್ಹಾದ್‌ ಜೋಶಿ ಸೇರಿ ಹಿರಿಯ ಸಚಿವರ ತಂಡ ರಚನೆ

ಮಧ್ಯಪ್ರಾಚ್ಯ ಸಂಘರ್ಷ; ಪರಿಸ್ಥಿತಿ ನಿಭಾಯಿಸಲು ಸಚಿವರ ತಂಡ ರಚನೆ

PM Modi meeting: ಇರಾನ್-ಇಸ್ರೇಲ್‌ ಯುದ್ಧ ಹಿನ್ನೆಲೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಸಚಿವರು ಮತ್ತು ಅಧಿಕಾರಿಗಳ ತುರ್ತು ಸಭೆ ನಡೆಸಿದ್ದಾರೆ. ಈ ವೇಳೆ ಆಹಾರ ಭದ್ರತೆ, ರೈತರಿಗೆ ರಸಗೊಬ್ಬರ ಲಭ್ಯತೆ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ.

ಪ್ರಣೀತ್ ಕುಮಾರ್ ಕೈಯಲ್ಲಿ ಅರಳಿದ ರಥ

ಪ್ರಣೀತ್ ಕುಮಾರ್ ಕೈಯಲ್ಲಿ ಅರಳಿದ ರಥ

ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ಪ್ರಣೀತ್, ಕೇವಲ ನಾಲ್ಕು ದಿನಗಳ ಅಲ್ಪಾವಧಿ ಯಲ್ಲಿ ಮೂರು ಅಡಿ ಎತ್ತರದ ಈ ರಥವನ್ನು ನಿರ್ಮಿಸಿದ್ದಾರೆ. ಇದಕ್ಕೆ ‘ಶ್ರೀಮನ್ ಮಹಾ ಸ್ಯಂದನ ರಥ’ ಎಂದು ನಾಮಕರಣ ಮಾಡಲಾಗಿದ್ದು, ಇದು ಅಸಲಿ ಮಹಾರಥದ ಪ್ರತಿರೂಪದಂತೆಯೇ ಕಂಗೊಳಿಸುತ್ತಿದೆ.

Murder Case: ಹಾಡಹಗಲೇ ಮಹಿಳೆಯನ್ನು ಹೊಡೆದು ಕೊಂದು ತಿಪ್ಪೆಗೆಸೆದು ಹೋದ ಕಿರಾತಕರು!

ಹಾಡಹಗಲೇ ಮಹಿಳೆಯನ್ನು ಹೊಡೆದು ಕೊಂದು ತಿಪ್ಪೆಗೆಸೆದು ಹೋದ ಕಿರಾತಕರು!

ಕೆಂಗೇರಿಯ ಮುಖ್ಯ ರಸ್ತೆಯಲ್ಲಿರುವ ಮೈಲ್ಸಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಮಹದೇಶ್ವರ ಬಡಾವಣೆಯ ನಿವಾಸಿಯಾದ ಕೆಂಪಮ್ಮ (45) ಎಂಬವರೇ ಕೊಲೆಯಾದ ದುರ್ದೈವಿ. ಹಂತಕರು ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ರಸ್ತೆ ಪಕ್ಕದ ಕಸದ ರಾಶಿಯಲ್ಲಿ ಎಸೆದಿದ್ದಾರೆ.

Davanagere Byelection: ಯಾರ ಬಾಯಿಗೆ 'ದಾವಣಗೆರೆ ಬೆಣ್ಣೆ ದೋಸೆ'?

Davanagere Byelection: ಯಾರ ಬಾಯಿಗೆ 'ದಾವಣಗೆರೆ ಬೆಣ್ಣೆ ದೋಸೆ'?

ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕೇತ್ರದ ಉಪಚುನಾವಣೆ ಕಣ ದಿನೇದಿನೆ ರಂಗೇರುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಕೊನೆಗೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಖಾಡ ಕ್ಕಿಳಿಸಿವೆ. ದಾವಣಗೆರೆ ಬೆಣ್ಣೆ ದೋಸೆ ಯಾರ ಬಾಯಿಗೆ ಮತದಾರ ಇಡಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

Supremacy of Bagalkot: ಬಾಗಲಕೋಟೆ ಅಧಿಪತ್ಯಕ್ಕೆ ಮೇಟಿ-ಚರಂತಿಮಠ ಯುದ್ಧ

ಬಾಗಲಕೋಟೆ ಅಧಿಪತ್ಯಕ್ಕೆ ಮೇಟಿ-ಚರಂತಿಮಠ ಯುದ್ಧ

ಮೇಟಿ ಕುಟುಂಬದಲ್ಲಿನ ಕಲಹ ಈ ಬಾರಿ ಟಿಕೆಟ್ ವಿಚಾರವಾಗಿ ಬಹಳಷ್ಟು ಚರ್ಚೆ ಯಾದರೂ ಸಿಎಂ ಸಿದ್ದರಾಮಯ್ಯ ಮಾತಿಗೆ ಅಸಮಾಧಾನ ಕೊಂಚ ಕಡಿಮೆಯಾಗಿದೆ. ಆಪ್ತ ಸ್ನೇಹಿತನ ಮಗನನ್ನು ಗೆಲ್ಲಿಸುವ ಪ್ರಯತ್ನದಲ್ಲಿರುವ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಉಪಕದನ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ.

ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಂದ ವೀರಶೈವ ಲಿಂಗಾಯಿತರಿಗೆ ಕನಿಷ್ಠ 100 ಟಿಕೆಟ್ ನೀಡಬೇಕು: ಎಂ.ಕೆ.ಬಸವರಾಜ್ ಒತ್ತಾಯ

ವೀರಶೈವ ಲಿಂಗಾಯಿತರಿಗೆ ಕನಿಷ್ಠ 100 ಟಿಕೆಟ್ ನೀಡಬೇಕು

ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಉಳ್ಳಂತಹ ಹಾಗೂ ರಾಜ್ಯವನ್ನ ಸಮಗ್ರವಾಗಿ ಎಲ್ಲಾ ಪಕ್ಷ ದಲ್ಲೂ ವೀರಶೈವ ಲಿಂಗಾಯಿತರ ಶಾಸಕರ ಹಾಗೂ ಜನಪ್ರತಿನಿಧಿಗಳ ಸಂಖ್ಯೆ ಗಮನದಲ್ಲಿಟ್ಟು ಕೊಂಡರೆ 2015 ಪಾಲಿಕೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಸಿಕ್ಕ ಟಿಕೆಟ್ ಕೇವಲ ಬೆರಳೆಣಿಕೆ ಇಡಿ ಬೆಂಗಳೂರು ಸೇರಿದಂತೆ, ಅಂದಾಜಿನ ಪ್ರಕಾರ ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷ ಇದ್ದಾರೆ.

ನಷ್ಟದಲ್ಲಿಯೇ ದಿನದೂಡುತ್ತಿರುವ ಹಲವು ನಿಗಮಗಳು

ನಷ್ಟದಲ್ಲಿಯೇ ದಿನದೂಡುತ್ತಿರುವ ಹಲವು ನಿಗಮಗಳು

ವಿದ್ಯುತ್, ಸಾರಿಗೆ, ನೀರಾವರಿ ಇಲಾಖೆಯ ಹೊರತಾಗಿ ವಿವಿಧ ಸಮುದಾಯ, ವಿವಿಧ ಉದ್ದೇಶ ಗಳಿಗೆ ಒಟ್ಟು 128 ಸರಕಾರಿ ಉದ್ದಿಮೆಗಳನ್ನು ಸ್ಥಾಪಿಸಿರುವುದಾಗಿ ಹೇಳಲಾಗಿದ್ದು, ಇವುಗಳ ಪೈಕಿ ಒಟ್ಟು 24 ಉದ್ದಿಮೆಗಳು ನಷ್ಟದ ಸುಳಿಯಲ್ಲಿವೆ. ಈ 24 ಸರಕಾರಿ ಉದ್ದಿಮೆಗಳ ಪೈಕಿ ಸಾರಿಗೆ ಸಂಸ್ಥೆಗೆ ಸೇರಿರುವ ನಾಲ್ಕು, ಇಂಧನ ಇಲಾಖೆಯ ಐದಾರು ಎಸ್ಕಾಂಗಳ ನಷ್ಟ ಬಹುಪಾಲು ಹೊಂದಿದೆ.

ಕಲಬುರಗಿಯಲ್ಲಿ ʼಜಲಕ್ಷಾಮʼ

ಕಲಬುರಗಿಯಲ್ಲಿ ʼಜಲಕ್ಷಾಮʼ

ಆಳಂದ ತಾಲೂಕಿನ ಕವಲಗಾ ಗ್ರಾಮದ ಜನ ಹನಿ ನೀರಿಗೆ ಪರಿತಪಿಸುವ ಸ್ಥಿತಿ ನಿರ್ಮಾಣ ಆಗಿದೆ. ಇಲ್ಲಿನ ಮಹಿಳೆಯರು ಹಗಲು ರಾತ್ರಿಯನ್ನೂ ಲೆಕ್ಕಿಸದೇ ನಲ್ಲಿ ನೀರು ಹಿಡಿಯಲು ಕಾಯುವುದು ಸಾಮಾನ್ಯವಾಗಿದೆ. ಗ್ರಾಮದ ಸಾರ್ವಜನಿಕ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದ್ದು, ನಲ್ಲಿ ನೀರಿನ ಮೇಲೆ ಸಂಪೂರ್ಣ ಅವಲಂಬನೆ ಆಗಿದ್ದಾರೆ.

Karianna Sangati: ಪರಿಷತ್‌ ಮಾಜಿ ಸದಸ್ಯ, ಡಿಕೆಶಿ ಆಪ್ತ ಕರಿಯಣ್ಣ ಸಂಗಟಿ ಇನ್ನಿಲ್ಲ

ಪರಿಷತ್‌ ಮಾಜಿ ಸದಸ್ಯ, ಡಿಕೆಶಿ ಆಪ್ತ ಕರಿಯಣ್ಣ ಸಂಗಟಿ ಇನ್ನಿಲ್ಲ

ಕರಿಯಣ್ಣ ಸಂಗಟಿ ಅವರು ರಾಜಕೀಯವಾಗಿ ಸಕ್ರಿಯರಾಗಿದ್ದು, ಎರಡು ಬಾರಿ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸರಳ ವ್ಯಕ್ತಿತ್ವ ಮತ್ತು ಸಂಘಟನಾ ಸಾಮರ್ಥ್ಯದಿಂದ ಅವರು ಜನಮನ್ನಣೆ ಗಳಿಸಿದ್ದರು. ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿದ್ದ ಅವರು ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅಹೋರಾತ್ರಿ ನಾಟಕಕ್ಕೆ ಸಿಗದ ಕಲಾವಿದರು?

ಅಹೋರಾತ್ರಿ ನಾಟಕಕ್ಕೆ ಸಿಗದ ಕಲಾವಿದರು?

ವಚನ ಕಲ್ಯಾಣಕ್ಕೆ ಒಟ್ಟು 75 ಕಲಾವಿದರನ್ನು ಆಯ್ಕೆ ಮಾಡುವ ಗುರಿ ಹೊಂದಿದ್ದರೂ, ಅರ್ಜಿ ಯನ್ನು ಕೇವಲ ಕೇವಲ 58 ಮಂದಿ ಮಾತ್ರ ಸಲ್ಲಿಸಿದ್ದಾರೆ. ನಿಗದಿತ ದಿನಾಂಕ ಮುಗಿದರೂ ಅಗತ್ಯ ವಿರುವಷ್ಟು ಕಲಾವಿದರಿಂದ ಅರ್ಜಿ ಬಾರದಿರುವುದರಿಂದ ಇದೀಗ ಅರ್ಜಿ ಅವಧಿಯನ್ನು ವಿಸ್ತರಿಸಲು ಇಲಾಖೆ ಮುಂದಾಗಿದೆ.

Nippani BJP: ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆ: 50ಕ್ಕೂ ಹೆಚ್ಚು ಕಾರ್ಯಕರ್ತರ ಸೇರ್ಪಡೆ

ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆ

ಮಲ್ಲಪ್ಪಾ ಚೌಗಲೆ, ಆನಂದ ಆವಟೆ, ವಿಳಾಸ ಜಳನೆ, ಚಂದ್ರಕಾಂತ ಬೀಳಗೆ, ರಾಜು ಮುಲ್ಲಾ, ರಾಜು ಬೀಳಗೆ, ವಿಕಾಸ ಹೋಗಾಡೇ, ಸಚಿನ್ ಇಂಗರೊಳೆ, ವಿಠ್ಠಲ್ ಬೀಳಗೆ ಸೇರಿದಂತೆ ಅನೇಕರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ಲಭಿಸಿದೆ.

Abortion: ಅತ್ಯಾಚಾರ ಸಂತ್ರಸ್ತೆಯ 34 ವಾರಗಳ ಭ್ರೂಣದ ಗರ್ಭಪಾತಕ್ಕೆ ಹೈಕೋರ್ಟ್‌ ನಿರಾಕರಣೆ

ಅತ್ಯಾಚಾರ ಸಂತ್ರಸ್ತೆಯ 34 ವಾರದ ಭ್ರೂಣ ಗರ್ಭಪಾತಕ್ಕೆ ಹೈಕೋರ್ಟ್‌ ನಿರಾಕರಣೆ

34 ವಾರಗಳ ಸುದೀರ್ಘ ಅವಧಿಯ ನಂತರ ಗರ್ಭಪಾತ ಮಾಡುವುದು ಅಕಾಲಿಕ ಹೆರಿಗೆಗೆ ಸಮಾನ. ಇದು ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಗಂಭೀರ ಅಪಾಯ ತಂದೊಡ್ಡಬಹುದು ಎಂದು ವೈದ್ಯಕೀಯ ಮಂಡಳಿ ವರದಿ ನೀಡಿದೆ. ಸಂತ್ರಸ್ತೆ ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಅಘಾತಕ್ಕೆ ಒಳಗಾಗಿದ್ದರೂ, ಈ ಹಂತದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ವೈದ್ಯಕೀಯವಾಗಿ ಸುರಕ್ಷಿತವಲ್ಲ ಎಂದು ನ್ಯಾಯಾಲಯ ತಿಳಿಸಿದೆ.

LPG Crisis: 12 ದಿನದ ಸಂಕಷ್ಟಕ್ಕೆ ಪರಿಹಾರ, ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಲಿದೆ ಎಲ್‌ಪಿಜಿ ಪೂರೈಕೆ

ಇಂದಿನಿಂದ ಹೋಟೆಲ್‌ಗಳಿಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಹೆಚ್ಚಳ

ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಈ ಹಿಂದೆ ಶೇ. 30ರಷ್ಟು ಕಡಿತಗೊಳಿಸಲಾಗಿತ್ತು. ಇದರಿಂದ ಕೇವಲ ಬೆಂಗಳೂರು ಮಾತ್ರವಲ್ಲದೆ ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಜನಸಾಮಾನ್ಯರು ಮತ್ತು ಹೋಟೆಲ್ ಮಾಲೀಕರು ಪರದಾಡುವಂತಾಗಿತ್ತು. ಈಗ ಕೇಂದ್ರದ ಹೊಸ ಆದೇಶದಿಂದ ಹೋಟೆಲ್ ಉದ್ಯಮ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

Road Accident: ರಾಮನಗರ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ, ನಾಲ್ವರು ಸಾವು

ಕೇರಳದಿಂದ ಬೆಂಗಳೂರಿನತ್ತ ಬರುತ್ತಿದ್ದ ಬಸ್, ನಿದ್ರೆ ಮಂಪರಿನಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫೆನ್ಸಿಂಗ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್‌ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಚನ್ನಪಟ್ಟಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Reels craze: ಹುಬ್ಬಳ್ಳಿ: ರೀಲ್ಸ್‌ಗಾಗಿ ಕಾರು ಗುದ್ದಿಸಿದ ಬಾಲಕ, ಆತನ ಅಪ್ಪ ಇಬ್ಬರೂ ಸೆರೆ

ಹುಬ್ಬಳ್ಳಿ: ರೀಲ್ಸ್‌ಗಾಗಿ ಕಾರು ಗುದ್ದಿಸಿದ ಬಾಲಕ, ಆತನ ಅಪ್ಪ ಇಬ್ಬರೂ ಸೆರೆ

ರೀಲ್ಸ್ ಮಾಡಲು ಹೋದಾಗ ಆಡಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿದ್ದು, ಬಾಲಕನೋರ್ವ ಮೃತಪಟ್ಟಿದ್ದ. ನಮೀಷ್ ಇದ್ದ ಸ್ಕೂಟಿಗೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಆಡಿ ಕಾರು ಗುದ್ದಿದ ಪರಿಣಾಮ ನಮೀಷ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

Davanagere Byelection: ಟಿಕೆಟ್ ಹಂಚಿಕೆ ಹಿಂದೆ ಸ್ವಯಂ ಲಾಭಗಳ ತಂತ್ರ

ಟಿಕೆಟ್ ಹಂಚಿಕೆ ಹಿಂದೆ ಸ್ವಯಂ ಲಾಭಗಳ ತಂತ್ರ

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ‘ಬಿ’ ಫಾರಂ ಸಿಗುವ ಮುನ್ನವೇ ನಾಮಪತ್ರ ಸಲ್ಲಿಸಿ ಪಕ್ಷದ ನಾಯಕರನ್ನು ಒಂದು ರೀತಿಯಲ್ಲಿ ಬಲೆಗೆ ಸಿಲುಕಿಸಿಕೊಂಡಂತೆ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪಕ್ಷದ ಹಿರಿಯ ನಾಯಕರೊಬ್ಬರ ಸಲಹೆ ಯೂ ಇತ್ತು ಎನ್ನಲಾಗಿದೆ.

MLA Yashwant Rayagouda Patil: ಹೆಣ್ಣು ಹುಟ್ಟಿದರೆ ಹುಣ್ಣಲ್ಲ, ಹೊನ್ನು ಹುಟ್ಟಿದಂತೆ: ಯಶವಂತರಾಯಗೌಡರು

ಹೆಣ್ಣು ಹುಟ್ಟಿದರೆ ಹುಣ್ಣಲ್ಲ, ಹೊನ್ನು ಹುಟ್ಟಿದಂತೆ: ಯಶವಂತರಾಯಗೌಡರು

ಭ್ರೂಣ ಹತ್ಯೆ ಬೇಡ, ಅದಕ್ಕಾಗಿ ಅವಕಾಶ ನೀಡಬಾರದು, ಬಸವಣ್ಣನವರ ಕಾಲದಿಂದಲೂ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ನೀಡಿದ್ದು ಇಂದಿನ ವರೆಗೂ ಅದು ಮುಂದು ವರೆದಿದೆ. ಹೆಣ್ಣು ತನ್ನ ತಂದೆಯ ಮನೆ ಬೆಳಗಿ ಗಂಡನ ಮನೆಯೂ ಬೆಳಗುತ್ತಿದ್ದಾಳೆ. ಹೀಗಾಗಿ ಹೆಣ್ಣು ಹೊನ್ನಾಗಿ ಪರಿವರ್ತನೆಯಾಗಿದ್ದಾರೆ

MLA Yashwant Rayagouda Patil: ಪ್ರಕೃತಿಯಲ್ಲಿ ದಿವ್ಯನಿಗೂಢ ಶಕ್ತಿ ನಡೆದು ಹೋಗುತ್ತವೆ: ಶಾಸಕ ಯಶವಂತರಾಯಗೌಡ ಪಾಟೀಲ.

ಪ್ರಕೃತಿಯಲ್ಲಿ ದಿವ್ಯನಿಗೂಢ ಶಕ್ತಿ ನಡೆದು ಹೋಗುತ್ತವೆ: ಶಾಸಕ ಪಾಟೀಲ

ಇಂದಿನ ದಿನಮಾನಗಳಲ್ಲಿ ಮನೆ ನಡೆಸುವುದೇ ಕಷ್ಟ. ಇಂತಹದರಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಕರ ವೇತನ, ಸಿಬ್ಬಂದಿಗಳ ವೇತನ ಹಾಗೂ ಭವ್ಯ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಸರಕಾರಗಳಿಂದ ಅಸಾಧ್ಯದ ಮಾತು. ಆದರೆ, ಸರಕಾರ ಮಾಡದೆ ಇರುವ ಪವಿತ್ರ ಕಾರ್ಯ ಹಜರತ ನಾಸಿರಜಂಗ ಸಾಹೇಬ ದರ್ಗಾ ದಿಂದ ನಡೆಸಿಕೊಂಡು ಬಂದಿರುವುದು ಖುಷಿ ತಂದಿದೆ

ಹಳೇ ಮೀಸಲಾತಿ ಮುಂದುವರಿಸಲು ಆಗ್ರಹಿಸಿ ಮಾ.24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ

ಮಾ.24ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ

ಹೊಲಯ ಜಾತಿಗಳಿಗೆ ಸಂಬಂಧಿಸಿದ ಛಲವಾಡಿ, ಚನ್ನದಾನ, ದಾನ, ಅದಿ ಕರ್ನಾಟಕ, ಅದಿ ದ್ರಾವಿಡ ಇತರ ಹೊಲಯ ಜಾತಿಗಳಿಗೆ ಸಂಬಂಧಿಸಿ ವರ್ಗಗಳನ್ನು ಒಟ್ಟುಗೂಡಿಸಿ ಜನಸಂಖ್ಯೆ ನಮೂದಿಸುವ ಬದಲು ಪ್ರತ್ಯೇಕವಾಗಿ ವಿಂಗಡಿಸುವ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ಹೊಲಯ ಬಲಗೈ ಜಾತಿಗೆ ಘೋರ ಅನ್ಯಾಯ ಮಾಡುವಂತಹ ಅವೈಜ್ಞಾನಿಕ ವರದಿಯನ್ನು ನೀಡಿದ್ದಾರೆ

Minister Shivraj Thangadagi hospitalised: ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಚಿವ ಶಿವರಾಜ್ ತಂಗಡಗಿ ಅವರಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆರೋಗ್ಯದಲ್ಲಿ ಏರುಪೇರಾದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ(Shivraj Thangadgi) ನಗರದ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಬೆಂಗಳೂರಿನ ಕಡೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಸಚಿವರ ಆರೋಗ್ಯದಲ್ಲಿ ದಿಢೀರನೇ ಏರುಪೇರಾಗಿದೆ. ಕೂಡಲೇ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಬಾಲಕಿಯನ್ನು ಕತ್ತು ಸೀಳಿ ಕೊಂದಿದ್ದ ಆರೋಪಿ ಶಬೀಲ್‌ ಅಜ್ಮೀರ್‌ನಲ್ಲಿ ಅರೆಸ್ಟ್‌

ಬಾಲಕಿಯನ್ನು ಹತ್ಯೆಗೈದಿದ್ದ ಆರೋಪಿ ಶಬೀಲ್‌ ಅಜ್ಮೀರ್‌ನಲ್ಲಿ ಅರೆಸ್ಟ್‌

Bengaluru Murder Case: ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಕೊಲೆ ಪ್ರಕರಣದ ಆರೋಪಿ ಶಬೀಲ್‌ನನ್ನು ರಾಜಸ್ಥಾನದ ಅಜ್ಮೀರ್‌ನಲ್ಲಿ ಬಂಧಿಸಲಾಗಿದೆ. ಮದುವೆಯಾಗಬೇಕಿದ್ದ ಹುಡುಗಿಯನ್ನೇ ಕೊಲೆ ಮಾಡಿ ಈತ ಪರಾರಿಯಾಗಿದ್ದ. ಇದೀಗ ಆರೋಪಿಯ ಬಂಧನವಾಗಿದೆ.

Loading...