ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅದ್ಧೂರಿಯಾಗಿ ಉದ್ಘಾಟನೆಗೊಂಡ ಮೂರನೇ ಅಂತಾರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನ 2025

ಜನರಿಗೆ ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ ಹೋಗಿ, ನಾವು ಹಣವನ್ನು ನೀಡುತ್ತೇವೆ ನಮಗೆ ಆರೋಗ್ಯವನ್ನು ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ನಮ್ಮ ನ್ಯಾಚುರೋಪತಿ ಮತ್ತು ಆಯುರ್ವೇದ ಕಾಲೇಜಿನಲ್ಲಿ ದೇಹವು ತಾನಾಗಿಯೇ ಗುಣಮುಖವಾಗುತ್ತದೆ ಎಂದು ಹೇಳಿಕೊಡುತ್ತೇವೆ

ಆಧುನಿಕ ನ್ಯಾಚುರೋಪತಿ ಪಿತಾಮಹ ಡಾ.ವೀರೇಂದ್ರ ಹೆಗ್ಗಡೆ

Profile Ashok Nayak May 13, 2025 10:51 AM

ಉಜಿರೆ: ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸ್‌ ಕಾಲೇಜಿನಲ್ಲಿ ಮೂರನೇ ಅಂತಾ ರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಿತು. ಈ ಸಮ್ಮೇಳನವು ಐದು ದಿನಗಳ ಕಾಲ ನಡೆಯಲಿದ್ದು ಮೇ ಹದಿನಾರರಂದು ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉಪನ್ಯಾಸಕರು ಪಾಳ್ಗೊಳ್ಳ ಲಿದ್ದಾರೆ. ಮೊದಲ ದಿನದ ಅಂಗವಾಗಿ ಸಮ್ಮೇಳನದ ಉದ್ಘಾಟನೆ ಹಾಗೂ ಯೋಗ ಮತ್ತು ನ್ಯಾಚು ರೋಪತಿ ಕುರಿತಾದ ಹಲವು ಪುಸ್ತಕಗಳು ಬಿಡುಗಡೆಗೊಂಡವು.

ನಮ್ಮಲ್ಲೀಗ ಮೂರು ಯೋಗ ಮತ್ತು ನ್ಯಾಚುರೋಪತಿ ಕಾಲೇಜುಗಳಿವೆ. ಆ ಮೂರೂ ಕಾಲೇಜುಗಳೂ ದೇಹವು ತಾನಾಗಿಯೇ ಗುಣಗೊಳ್ಳುತ್ತದೆ ಮತ್ತು ತಾನಾಗಿಯೇ ಭೂಮಿಗೆ ಸೇರುತ್ತದೆ (Body heals itself and returns to nature) ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದೆ. ನಮ್ಮ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಇದ್ದಾರೆ ಹಾಗೂ ಜನರನ್ನು ಯೋಗ ಮತ್ತು ನ್ಯಾಚುರೋಪತಿಯ ಮೂಲಕ ಗುಣಪಡಿಸುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾದಿಕಾರಿ ಹಾಗೂ ಎಸ್‌ಡಿಎಂಸಿ ಸೊಸೈಟಿ ಅಧ್ಯಕ್ಷರಾದ ಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮುಂದುವರೆಯುತ್ತಿದೆ. ಜನರಿಗೆ ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ ಹೋಗಿ, ನಾವು ಹಣವನ್ನು ನೀಡುತ್ತೇವೆ ನಮಗೆ ಆರೋಗ್ಯವನ್ನು ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ನಮ್ಮ ನ್ಯಾಚುರೋಪತಿ ಮತ್ತು ಆಯುರ್ವೇದ ಕಾಲೇಜಿನಲ್ಲಿ ದೇಹವು ತಾನಾಗಿಯೇ ಗುಣಮುಖವಾಗುತ್ತದೆ ಎಂದು ಹೇಳಿಕೊಡುತ್ತೇವೆ ಎಂದರು.

ಇದನ್ನೂ ಓದಿ: Roopa Gururaj Column: ಎಲ್ಲಿಯೂ ಸಲ್ಲದ ಬಾವಲಿಗಳು

ಎಸ್‌ವಿವೈಎಎಸ್‌ಎ ಕುಲಪತಿಗಳಾದ ಡಾ.ಎಸ್‌.ನಾಗೇಂದ್ರ ಅವರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರಿಂದ ಜೀವಮಾನ ಸಾಧನೆ ಸನ್ಮಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ವಿವೈಎಎಸ್‌ಎ(S-VYASA) ಯುನಿವೆರ್ಸಿಟಿಯ ಕುಲಪತಿ ಗಳಾದ ಶ್ರೀ ಹೆಚ್‌ ಆರ್‌ ನಾಗೇಂದ್ರ ಮಾತನಾಡಿ, ಇಂದಿನ ಜಗತ್ತು ಹಲವು ಆರೋಗ್ಯದ ಸಮಸ್ಯೆ ಗಳಿಂದ ಬಳಲುತ್ತಿದೆ. ಆದರೆ ಅವೆಲ್ಲವೂ ಕೇವಲ ಆಧುನಿಕ ವೈದ್ಯಕೀಯ ಚಿಕಿತ್ಸೆಯಿಂದ ಗುಣವಾ ಗುವುದಿಲ್ಲ. ಆಧುನಿಕ ಚಿಕಿತ್ಸೆಗಳ ಕೊಡುಗೆ ಜಗತ್ತಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ ಎನ್ನುವು ದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅವೆಲ್ಲವುಗಳ ಮಧ್ಯೆ ನಮ್ಮ ಆಯುರ್ವೇದ ಮತ್ತು ನ್ಯಾಚುರೋಪತಿಯ ಕೊಡುಗೆಗಳನ್ನು ನಾವು ಮರೆಯುವಂತಿಲ್ಲ. ಡಬ್ಲುಎಚ್‌ಒ(WHO) 2020ರಲ್ಲಿ ಯೇ ಎಲ್ಲಾ ಕಾಯಿಲೆಗಳನ್ನೂ ಮಾಯವಾಗಿಸುವುದಾಗಿ ಹೇಳಿತ್ತು ಆದರೆ ಅದು ಸಾಧ್ಯವಾಗಿಲ್ಲ ಎಂದರು.

Vheggade 2

ಕಂಪೋಡಿಯಂ ಆಫ್‌ ಡಿಫೆರಂಟ್‌ ಡಿಸೀಸಸ್‌ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ಬ್ರಿಜೇಶ್‌ ಚೌಟ, ನಮ್ಮ ಜಿಲ್ಲೆಯಲ್ಲಿಯೂ ಡೆಡಿಕೇ ಟೆಡ್‌ ಟ್ರೆಡಿಷನಲ್ ಮೆಡಿಸಿನ್ ಸೆಂಟರ್‌ ತರುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಆದರೆ ಎಸ್‌ಡಿಎಂ ಇದಾಗಲೇ ಯೋಗ ಮತ್ತು ನ್ಯಾಚುರೋಪತಿ ಕಾಲೇಜನ್ನು ಸ್ಥಾಪಿಸಿಯಾಗಿದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳನ್ನು ಶ್ಲಾಘಿಸಿದರು.

ಡಿಕ್ಟೆಟರಿ ಆಫ್‌ ನ್ಯಾಚುರೋಪತಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಐಎನ್‌ವೈಜಿಎಂಎ ಬೆಂಗಳೂರಿನ ರಾಷ್ಟ್ರೀಯ ಅಧ್ಯಕ್ಷ ಡಾ.ನವೀನ್‌ ಕೆ.ವಿ,ಹಲವರು ನ್ಯಾಚುರೋಪತಿಯನ್ನು ಅನು ಮಾನಿಸುತ್ತಾರೆ. ಆದರೆ ಇಷ್ಟು ವರ್ಷಗಳ ನನ್ನ ಅನುಭವದ ಪ್ರಕಾರ ನ್ಯಾಚುರೋಪತಿ ಮೂಲಕ ರೋಗ ಗುಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

VHeggde 3

ಎಸ್‌ವಿವೈಎಎಸ್‌ಎ ಉಪಕುಲಪತಿಗಳಾದ ಡಾ.ಎನ್‌ ಕೆ ಮಂಜುನಾಥ್‌ ಮಾತನಾಡಿ, ನಮ್ಮ ಭಾರತೀಯ ಸನಾತನ ಆಯುರ್ವೇದ ಮತ್ತು ನ್ಯಾಚುರೋಪತಿ ಪದ್ಧತಿಗಳು ಬೇರೆ ಬೇರೆ ದೇಶಗಳಲ್ಲಿ ಇಂದು ಪ್ರಸಿದ್ಧಿಯನ್ನು ಪಡೆಯುತ್ತಿದೆ. ಅದರಲ್ಲಿ ಎಸ್‌ಡಿಎಂ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಕೊಡುಗೆಯೂ ಮಹತ್ವದ್ದು ಎಂದು ಹೇಳುತ್ತಾ, ಡಾ.ವೀರೇಂದ್ರ ಹೆಗ್ಗಡೆಯವರನ್ನು ಆಧುನಿಕ ನ್ಯಾಚುರೋಪತಿಯ ನ್ಯಾಚುರೋಪತಿ ಪಿತಾಮಹ ಎಂದು ಹೇಳಬಹುದು ಎಂದರು.

ಕಾರ್ಯಕ್ರಮದಲ್ಲಿ ಎನ್‌ಐಎನ್‌ ಪುಣೆಯ ಮಾಜಿ ನಿರ್ದೇಶಕರಾದ ಡಾ.ಬಾಬು ಜೋಸೆಫ್‌, ಎಸ್‌.ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಹರ್ಷೇಂದ್ರ ಕುಮಾರ್‌, ಡಾ.ಸತೀಶ್‌ ಚಂದ್ರ, ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗಿಕ್‌ ಸೈನ್ಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಶಾಂತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.