Vastu Tips: ಮನೆಯ ಮುಂದೆ ಹತ್ತಿ ಮರವಿದ್ದರೆ ಸಮಸ್ಯೆಗಳು ಹೆಚ್ಚಾಗುವುದು..
ಮನೆಯ ಸುತ್ತ ಮುತ್ತ ಇರುವ ಗಿಡ (Vastu about tree) ಮರಗಳು ಮನೆ ಮತ್ತು ಮನೆ ಮಂದಿಯ ಏಳಿಗೆ, ಸಮೃದ್ಧಿ, ಯೋಗ ಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕೆಲವೊಂದು ಗಿಡಗಳು ಮನೆಯ ಮುಂದೆ, ಮನೆಯ ಬಳಿ ಇರಬಾರದು ಎನ್ನುತ್ತದೆ ವಾಸ್ತು ಶಾಸ್ತ್ರ. ಇನ್ನು ಕೆಲವು ಮನೆ ಎದುರು ಕೆಲವೊಂದು ಗಿಡಗಳಿದ್ದರೆ ಒಳ್ಳೆಯ ಪರಿಣಾಮಗಳೂ ಇವೆ. ಇವುಗಳಲ್ಲಿ ಹತ್ತಿಯ ಗಿಡ ಮನೆ ಮುಂದೆ ಇರುವುದು ಒಳ್ಳೆಯದೇ ? ಈ ಬಗ್ಗೆ ವಾಸ್ತು ತಜ್ಞರು ಹೇಳುವುದು ಏನು ? ಇಲ್ಲಿದೆ ಮಾಹಿತಿ.


ಮನೆಯ ಒಳಗೆ ಮತ್ತು ಹೊರಗೆ ಅದರಲ್ಲೂ ಮುಖ್ಯವಾಗಿ ಮನೆಯ (vastu for home) ಮುಂಭಾಗದಲ್ಲಿ ಇಡುವ ಗಿಡ (vastu for tree), ಮರಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಕೆಲವೊಂದು ಗಿಡಗಳು ಮನೆಯ ಮುಂದೆ ಇದ್ದರೆ ಶುಭ, ಇನ್ನು ಕೆಲವು ಗಿಡಗಳು ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇದರಲ್ಲಿ ಮುಖ್ಯವಾಗಿ ಹತ್ತಿ ಮರ ಮನೆಯ (vastu for home) ಮುಂದೆ ಇದ್ದರೆ ಶುಭವೋ ಅಶುಭವೋ ಎನ್ನುವ ಗೊಂದಲ ಹಲವರನ್ನು ಕಾಡಬಹುದು. ಇದರ ಕುರಿತಾಗಿ ವಾಸ್ತು ಶಾಸ್ತ್ರದಲ್ಲಿ (vastushastra) ಏನು ಹೇಳಿದೆ ಎಂಬುದನ್ನು ವಾಸ್ತು ತಜ್ಞರಾದ ರಾಧಾಕಾಂತ್ ವತ್ಸ್ ಹೇಳುವುದು ಹೀಗೆ..
ಮನೆಯ ಮುಂದೆ ಇಡಲು ಶುಭವೆಂದು ಪರಿಗಣಿಸಲಾದ ಅನೇಕ ಮರ, ಗಿಡಗಳಿವೆ. ಆದರೆ ಕೆಲವೊಂದು ಗಿಡ ಮರಗಳು ಮನೆಯ ಮುಂದೆ ಇರುವುದು ಕೂಡ ಮನೆಗೆ ತುಂಬಾ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು ಎನ್ನುತ್ತಾರೆ ರಾಧಾಕಾಂತ್ ವತ್ಸ್.

ಏನು ಸಮಸ್ಯೆ?
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಂದೆ ಹತ್ತಿ ಮರವಿದ್ದರೆ ತುಂಬಾ ಕೆಟ್ಟದೆಂದು ಪರಿಗಣಿಸಲಾಗುತ್ತದೆ. ಮನೆಯ ಮುಂದೆ ಹತ್ತಿ ಮರವಿದ್ದರೆ, ಅದು ಮನೆಯ ಸುತ್ತಮುತ್ತ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮನೆಯೊಳಗೆ ನಕಾರಾತ್ಮಕ ಶಕ್ತಿಯ ಪ್ರವೇಶ ಬಹುಬೇಗನೆ ಆಗುವುದು. ಇದರಿಂದ ಮನೆ ಮಂದಿಯ ಏಳಿಗೆ, ಸಮೃದ್ಧಿ, ಯೋಗ ಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಒಂದಲ್ಲಾ ಒಂದು ರೀತಿಯ ತೊಂದರೆಗಳು ಹೆಚ್ಚಾಗ ತೊಡಗುತ್ತವೆ.
ಮನೆಯ ಮುಂದೆ ಹತ್ತಿ ಮರವಿದ್ದರೆ ಅದು ಮನೆಗೆ ಬರುವಂತಹ ಸಂಪತ್ತನ್ನು ತಡೆಯುತ್ತದೆ. ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಸದಾ ಹಣದ ಕೊರತೆ ಕಾಡಲಾರಂಭಿಸುತ್ತದೆ. ಮನೆ ಮಂದಿಯ ಕೈಯಲ್ಲಿ ಹಣ ಹೆಚ್ಚು ಕಾಲ ಉಳಿಯುವುದಿಲ್ಲ. ಅತಿಯಾದ ಖರ್ಚು, ಸಾಲದ ಹೊರೆ ಅಧಿಕವಾಗತೊಡಗುತ್ತದೆ. ಆದಾಯದ ಮೂಲಗಳೇ ಕಾಣಿಸುವುದಿಲ್ಲ.
ಹತ್ತಿ ಮರವು ಮನೆಯ ಮುಂದೆ ಇದ್ದರೆ ವಾಸ್ತು ದೋಷವೂ ಉದ್ಭವಿಸುತ್ತದೆ. ಇದರಿಂದಾಗಿ ಮನೆಯಲ್ಲಿ ಒಂದರ ನಂತರ ಒಂದರಂತೆ ಸಮಸ್ಯೆಗಳು ಉಂಟಾಗುತ್ತವೆ. ಹತ್ತಿ ಮರದ ಮೂಲ ಸ್ವಭಾವವೆಂದರೆ ಅದರ ಬೇರುಗಳನ್ನು ಹರಡುವುದು.ಇದರಿಂದಾಗಿ ಮನೆಯ ನೆಲದಲ್ಲಿ ಬಿರುಕುಗಳು ಕಾಣಿಸುತ್ತವೆ.
ಇದನ್ನೂ ಓದಿ: Vastu Tips: ದೇವರ ಪೂಜೆಯ ವೇಳೆ ಪಾಲಿಸಲೇಬೇಕು ಈ 7 ನಿಯಮ
ಮನೆಯ ಮುಂದೆ ಹತ್ತಿ ಮರವಿದ್ದರೆ ಕುಟುಂಬದಲ್ಲಿ ಶಾಂತಿ ಇರುವುದಿಲ್ಲ. ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತದೆ.
ಪರಿಹಾರವೇನು?
ಒಂದು ವೇಳೆ ಮನೆಯ ಮುಂದೆ ಹತ್ತಿ ಮರವಿದ್ದರೆ ಅದರಿಂದ ಬರುವ ನಕಾರಾತ್ಮಕತೆಯನ್ನು ದೂರ ಮಾಡಲು ಮರಕ್ಕೆ ಹಾನಿಯಾಗದಂತೆ ಹತ್ತಿ ಮರದ ಕೊಂಬೆಯ ಮೇಲೆ ಕಪ್ಪು ದಾರವನ್ನು ಕಟ್ಟಿ. ಇದು ಅದರ ನಕಾರಾತ್ಮಕ ಶಕ್ತಿಯನ್ನು ಆ ಮರದ ಮೇಲೆಯೇ ಬಂಧಿಸುತ್ತದೆ ಮತ್ತು ಇದರಿಂದ ಮನೆಯ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎನ್ನುತ್ತಾರೆ ವಾಸ್ತು ತಜ್ಞರು.