ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಚಂಡೀಗಢದಲ್ಲಿ ಮೊಳಗಿದ ಸೈರನ್‌; ಹೈಅಲರ್ಟ್‌ ಘೋಷಣೆ

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ (Operation Sindoor) ನಿರ್ಮಾಣವಾಗಿದೆ. ಸೇನಾ ನೆಲೆಗಳು ಮತ್ತು ಇತರ ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ಬಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ಸಂಪೂರ್ಣ ವಿಫಲಗೊಳಿತ್ತು. ಇದೀಗ ಚಂಡೀಗಢದಲ್ಲಿ ಮತ್ತೆ ಸೈರನ್‌ ಸದ್ದು ಕೇಳಿ ಬಂದಿದ್ದು ಜನರು ಬೆಚ್ಚಿಬಿದ್ದಾರೆ.

ಚಂಡೀಗಢದಲ್ಲಿ ಮೊಳಗಿದ ಸೈರನ್‌; ಹೈಅಲರ್ಟ್‌  ಘೋಷಿಸಿದ ಸರ್ಕಾರ

Profile Vishakha Bhat May 9, 2025 10:33 AM

ಚಂಡೀಗಢ: ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ (Operation Sindoor) ನಿರ್ಮಾಣವಾಗಿದೆ. ಸೇನಾ ನೆಲೆಗಳು ಮತ್ತು ಇತರ ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ಬಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ಸಂಪೂರ್ಣ ವಿಫಲಗೊಳಿತ್ತು. ಇದೀಗ ಚಂಡೀಗಢದಲ್ಲಿ ಮತ್ತೆ ಸೈರನ್‌ ಸದ್ದು ಕೇಳಿ ಬಂದಿದ್ದು ಜನರು ಬೆಚ್ಚಿಬಿದ್ದಾರೆ. ಸೈರನ್‌ ಸದ್ದಾಗುತ್ತಿದ್ದಂತೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದು ಜನರು ಮನೆಯಿಂದ ಹೊರಬರಬಾರದು ಎಂದು ಸೂಚನೆ ನೀಡಿದೆ. ಮನೆಯ ಹೊರಗೆ ಹಾಗೂ ಬಾಲ್ಕನಿಯ ಮೇಲೆ ನಿಲ್ಲಬಾರದು ಎಂಬ ಸೂಚನೆಯನ್ನು ನೀಡಿದೆ.

ಭಾರತದ ನಾಗರಿಕ ಪ್ರದೇಶ ಹಾಗೂ ಸೇನಾ ನೆಲೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿತ್ತು. ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಆ ದಾಳಿಯನ್ನು ನಮ್ಮ ಸೇನಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನಗಳಲ್ಲಿ ಪಾಕಿಸ್ತಾನದ ದಾಳಿಯ ನಂತರ ಭಾರತ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಗುರುವಾರ ಸಂಜೆ ಭಾರತವು (Operation Sindoor) ರಾಜಸ್ಥಾನದ ರಾಮಗಡ್ ವಲಯದಲ್ಲಿ ಶತ್ರುವಿನ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಭಾರತೀಯ ವಾಯು ರಕ್ಷಣಾ ಘಟಕಗಳು ಸತ್ವಾರಿಯ ಆಯಕಟ್ಟಿನ ಮಹತ್ವದ ಜಮ್ಮು ವಿಮಾನ ನಿಲ್ದಾಣ ಸೇರಿದಂತೆ ಜಮ್ಮುವಿನ ಗಡಿ ಪ್ರದೇಶಗಳ ಕಡೆಗೆ ಪಾಕಿಸ್ತಾನ ಹಾರಿಸಿದ (India Pak war news) ಕನಿಷ್ಠ ಎಂಟು ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದಿವೆ.

LOC ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಭಾರತೀಯ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಯಿತು ಮತ್ತು ಸೇನೆಯಿಂದ ಕದನ ವಿರಾಮ ಉಲ್ಲಂಘನೆಗಳಿಗೆ "ಸೂಕ್ತ ಪ್ರತ್ಯುತ್ತರ" ನೀಡಲಾಯಿತು ಹೇಳಿಕೆ ಬಂದಿದೆ. ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ ಎಂದು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Operation Sindoor: ಪಾಕಿಸ್ತಾನದ ಎಫ್‌- 16 ಯುದ್ಧವಿಮಾನ, ಕ್ಷಿಪಣಿ ಹೊಡೆದುರುಳಿಸಿದ ಭಾರತ

ಇದೀಗ ಮುಂದಿನ ಕ್ರಮ ಕೈಗೊಳ್ಳಲು ರಕ್ಷಣಾ ಸಚಿವ ರಾಜನಾಥ ಸಿಂಗ್‌ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಿಡಿಎಸ್‌, 3 ಸೇನೆಯ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯ ನಂತರ ಸುದ್ದಿಗೋಷ್ಠಿ ನಡೆಯಲಿದೆ.