ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ʼಪಹಲ್ಗಾಮ್‌ʼ ಭಯೋತ್ಪಾದಕ ದಾಳಿ ; ರಷ್ಯಾ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಮೋದಿ

ಪಾಕಿಸ್ತಾನ ಹಾಗೂ ಭಾರತ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ಮೋದಿ (Narendra Modi) ತಮ್ಮ ನಿವಾಸದಲ್ಲಿ ಮೇಲಿಂದ ಮೇಲೆ ಮೀಟಿಂಗ್‌ ನಡೆಸುತ್ತಿದ್ದಾರೆ. ಗಡಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇಂತಹ ಸಮಯದಲ್ಲಿ ಪ್ರಧಾನಿ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ರಷ್ಯಾ ಪ್ರವಾಸ ರದ್ಧುಗೊಳಿಸಿದ ಪ್ರಧಾನಿ ಮೋದಿ

Profile Vishakha Bhat Apr 30, 2025 3:58 PM

ನವದೆಹಲಿ: ಪಾಕಿಸ್ತಾನ ಹಾಗೂ ಭಾರತ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ಮೋದಿ (Narendra Modi) ತಮ್ಮ ನಿವಾಸದಲ್ಲಿ ಮೇಲಿಂದ ಮೇಲೆ ಮೀಟಿಂಗ್‌ ನಡೆಸುತ್ತಿದ್ದಾರೆ. ಗಡಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇಂತಹ ಸಮಯದಲ್ಲಿ ಪ್ರಧಾನಿ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧದ ವಿಜಯದ 80 ನೇ ವಾರ್ಷಿಕೋತ್ಸವದ ಅಂಗವಾಗಿ ಮಾಸ್ಕೋದಲ್ಲಿ ಮೇ 9 ರಂದು ನಡೆಯಲಿರುವ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಪ್ರಧಾನಿ ಮೋದಿ ಉಪಸ್ಥಿತರಿಲ್ಲದಿದ್ದರೂ, ಭಾರತವನ್ನು ಬೇರೆ ರಾಜತಾಂತ್ರಿಕ ಪ್ರತಿನಿಧಿ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ. ಆದರೆ ಪ್ರತಿನಿಧಿ ಯಾರೆಂಬುದನ್ನು ಬಹಿರಂಗ ಪಡಿಸಿಲ್ಲ.

ವಾರ್ಷಿಕೋತ್ಸವಕ್ಕಾಗಿ ರಷ್ಯಾ ಭಾರತದ ಪ್ರಧಾನಿಗೆ ಆಹ್ವಾನ ನೀಡಿದ ನಂತರ ಈ ಘೋಷಣೆ ಬಂದಿದೆ. ದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯವು ಆಹ್ವಾನವನ್ನು ಅಂಗೀಕರಿಸಿದ್ದರೂ, ಪ್ರಧಾನಿ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ.

ಏನಿದು ವಿಜಯ ದಿನದ ಮೆರವಣಿಗೆ?

ರಷ್ಯಾದ ವಿಜಯ ದಿನಾಚರಣೆಯ ಭಾಗವಾಗಿ ಮೇ 9 ರಂದು ರೆಡ್ ಸ್ಕ್ವೇರ್‌ನಲ್ಲಿ ನಡೆಯುವ ವಾರ್ಷಿಕ ಮಾಸ್ಕೋ ವಿಜಯ ದಿನದ ಮೆರವಣಿಗೆಯು ಮಹತ್ವದ ಮಿಲಿಟರಿ ಪ್ರದರ್ಶನವಾಗಿದೆ.ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾಮಾನ್ಯವಾಗಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ ಪ್ರಮುಖ ಭಾಷಣ ಮಾಡುತ್ತಾರೆ. ಈ ಕಾರ್ಯಕ್ರಮವು ರಷ್ಯಾದ ಮಿಲಿಟರಿ ಶಕ್ತಿಯ ಪ್ರಮುಖ ಪ್ರದರ್ಶನವಾಗಿದೆ. ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ರಷ್ಯಾ ಸಾಧಿಸಿದ ನಿರ್ಣಾಯಕ ವಿಜಯದ ಸ್ಮರಣಾರ್ಥವಾಗಿ ಈ ಭವ್ಯ ಮೆರವಣಿಗೆ ನಡೆಯುತ್ತದೆ. ರಷ್ಯಾ 1945 ರಲ್ಲಿ ಜರ್ಮನಿಯ ವಿರುದ್ಧ ಪ್ರಮುಖ ದಾಳಿಯನ್ನು ಪ್ರಾರಂಭಿಸಿತು, ಮೇ 9 ರಂದು ಆಯಾ ಕಮಾಂಡರ್‌ಗಳು ಜರ್ಮನಿಯ ಬೇಷರತ್ತಾದ ಶರಣಾಗತಿಯ ಕಾಯ್ದೆಗೆ ಸಹಿ ಹಾಕುವಲ್ಲಿ ಇದು ಕೊನೆಗೊಂಡಿತು. ಇದರ ಅಂಗವಾಗಿ ವಿಜಯ ದಿನವನ್ನು ಆಚರಿಸಲಾಗುತ್ತಿದೆ.

ಭಾರತ್‌ ಪಾಕ್‌ ಮಧ್ಯೆ ಯುದ್ಧ?

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ಸಂಬಂಧ ಹಳಸಿಹೋಗಿದೆ. ಈಗಾಗಲೇ ಭಾರತ ರಾಜತಾಂತ್ರಿಕ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಎರಡು ಬಾರಿ ಸಂಪುಟ ಸಭೆಯನ್ನು ಕರೆದು ಮಾತುಕತೆ ನಡೆಸಿದ್ದಾರೆ. ಇತ್ತ ಪಾಕ್‌ ಕೂಡ್‌ ಯುದ್ಧೋನ್ಮಾದವಾಗಿದ್ದು, ತಮ್ಮ ಬಳಿ ಅಣ್ವಸ್ತ್ರವಿದೆ ಎಂದು ಭಾರತಕ್ಕೆ ಬೆದರಿಕೆ ಹಾಕಿದೆ. ಸದ್ಯ ಪರಿಸ್ಥಿತಿಯನ್ನು ನಿಭಾಯಿಸಲು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿದ್ದು, ಎರಡೂ ದೇಶಗಳ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಯುಎನ್‌ಒ ಅಧ್ಯಕ್ಷ.