Donald Trump: ಭಾರತ-ಪಾಕ್ ಸಂಘರ್ಷಕ್ಕೆ ಕೊನೆ ಹಾಡ್ತಾರಾ ಡೊನಾಲ್ಡ್ ಟ್ರಂಪ್?
Operation Sindoor: ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡೂ ದೇಶಗಳು ಶೀಘ್ರದಲ್ಲಿಯೇ ಸಂಘರ್ಷ ಕೊನೆಗೊಳಿಸಬೇಕು ಎಂದು ಕರೆ ನೀಡಿದ್ದಾರೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಗುರುವಾರ (ಮೇ 8) ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಶೀಘ್ರದಲ್ಲಿಯೇ ಸಂಘರ್ಷ ನಿಲ್ಲಿಸುವಂತೆ ಸೂಚಿಸಿದ್ದಾರೆ.

ಡೊನಾಲ್ಡ್ ಟ್ರಂಪ್.

ವಾಷಿಂಗ್ಟನ್: ಈ ಹಿಂದೆ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ ಬುದ್ದಿ ಕಲಿಯದ ಪಾಕಿಸ್ತಾನ ಉಗ್ರರಿಗೆ ಬಂಬಲ ನೀಡುತ್ತಲೇ ಬಂದಿದೆ. ಇದರಿಂದಾಗಿಯೇ ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 25 ಭಾರತೀಯರು, ಓರ್ವ ನೇಪಾಳಿ ಪ್ರಜೆ ಸೇರಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7ರಂದು ಆಪರೇಷನ್ ಸಿಂದೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ನೆಲಕ್ಕೆ ಮತ್ತೊಮ್ಮೆ ಲಗ್ಗೆ ಇಟ್ಟು ಉಗ್ರರ ನೆಲೆಯನ್ನು ನಾಶಗೊಳಿಸಿದೆ. ಅಲ್ಲದೆ ಸುಮಾರು 100 ಉಗ್ರರನ್ನು ಕೊಂದು ಹೊಸಕಿ ಹಾಕಿದೆ. ಇದಾದ ಬಳಿಕ ಪಾಕ್ ಹೇಡಿಯಂತೆ ದಾಳಿ ನಡೆಸುತ್ತಲೇ ಬರುತ್ತಿದ್ದು, ಭಾರತ ಅದನ್ನು ವಿಫಲಗೊಳಿಸುತ್ತಿದೆ. ಇದೇ ಕಾರಣಕ್ಕೆ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಎರಡೂ ದೇಶಗಳು ಶೀಘ್ರದಲ್ಲಿಯೇ ಸಂಘರ್ಷ ಕೊನೆಗೊಳಿಸಬೇಕು ಎಂದು ಕರೆ ನೀಡಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಗುರುವಾರ (ಮೇ 8) ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಶೀಘ್ರದಲ್ಲಿಯೇ ಸಂಘರ್ಷ ನಿಲ್ಲಿಸುವಂತೆ ಸೂಚಿಸಿದ್ದಾರೆ.
#WATCH | Washington, DC | On US efforts to mediate in the India-Pakistan conflict, White House Press Secretary Karoline Leavitt says, "This is something that the Secretary of State and now our NSA as well, Marco Rubio, has been involved in. The President has expressed that he… pic.twitter.com/NL55jSFyIM
— ANI (@ANI) May 9, 2025
ಈ ಸುದ್ದಿಯನ್ನೂ ಓದಿ: IMF: ಭಾರತದ ಒತ್ತಾಯಕ್ಕೆ ಮಣೆ ಹಾಕದ ಐಎಂಎಫ್: ಪಾಕ್ಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಬಗ್ಗೆ ಮಾಹಿತಿ ನೀಡಿ ಎರಡೂ ದೇಶಗಳ ನಡುವೆ ವೈಟ್ ಹೌಸ್ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ. ʼʼಡೊನಾಲ್ಡ್ ಟ್ರಂಪ್ ಅವರು ಈ ಸಂಘರ್ಷವನ್ನು ಕೊನೆಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಜತೆ ಮಾತನಾಡಿದ ಮಾರ್ಕೊ ರುಬಿಯೊ, ಉಗ್ರವಾದಿ ಗುಂಪುಗಳಿಗೆ ನೀಡುವ ಬೆಂಬಲವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಭಾರತದ ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ತಾಣವನ್ನು ನಾಶಪಡಿಸಿದೆ. ಇದರಿಂದ ಕೆರಳಿರುವ ಪಾಕಿಸ್ತಾನ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಸದಾಗ್ಯೂ ಈ ದಾಳಿಗಳನ್ನು ಭಾರತ ಹಿಮ್ಮೆಟ್ಟಿಸಿದೆ.